ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಹೇಳಿದ್ದೇನು..?

ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಹೇಳಿದ್ದೇನು..?

ಬೆಂಗಳೂರು: ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ನಟಿ ಪವಿತ್ರ ಗೌಡ ಅವರ ಬಂಧನವಾಗಿದ್ದು, ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದು, ನಾನು ಹಾಗೂ ಪವಿತ್ರಾ ಗೌಡ ದೂರವಾಗಿ 12 ವರ್ಷಗಳಾಗಿವೆ. ನನಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವಾಗಲಿ, ಸಂಬಂಧವಾಗಲಿ ಎಂದಿದ್ದಾರೆ.

‘ನಾವಿಬ್ಬರೂ ಬೆಂಗಳೂರಿನಲ್ಲಿಯೇ ಮೊದಲು ಪರಿಚಯವಾಗಿದ್ದವು. ಮದುವೆಯಾದವು, ಆದರೆ ನಮ್ಮಿಬ್ಬರ ವೃತ್ತಿಗಳು ಬೇರೆ ಬೇರೆ ಆಗಿದ್ದವು. ನಾನು ಐಟಿ ಉದ್ಯಮದವನು, ಅವರ ಸಿನಿಮಾ ಕ್ಷೇತ್ರದವರು. ನಮ್ಮಿಬ್ಬರ ನಡುವೆ ಇದೇ ಕಾರಣಕ್ಕೆ ಹೊಂದಾಣಿಕೆ ಕೊರತೆ ಇತ್ತು. ಪರಸ್ಪರರಿಗೆ ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ ಹಾಗಾಗಿ ವಿಚ್ಛೇದನ ಪಡೆದುಕೊಂಡೆವು ಎಂದಿದ್ದಾರೆ ಸಂಜಯ್ ಸಿಂಗ್. ಇದನ್ನೂ ಓದಿ: ಚಾಲೆಂಜಿಂಗ್‌ ಸ್ಟಾರ್‌ ವಿರುದ್ಧ ಓಪನ್‌ ಆಗುತ್ತಾ ರೌಡಿಶೀಟ್‌..?

ನನಗೆ ಪವಿತ್ರ ಗೌಡ ತುಂಬಾ ಚೆನ್ನಾಗಿ ಗೊತ್ತು. ಬೈ ಮಿಸ್ ಇದು ಆಗಿರಬಹುದು. ಅವಳು ಮೆದುಳಿನಿಂದ ಬಹಳ ಸ್ಟ್ರಾಂಗ್ ಇದ್ದಾಳೆ. ಹೃದಯದಿಂದ ಬಹಳ ಸಾಫ್ಟ್ ಇದ್ದಾಳೆ. ಏನೋ‌ ತಪ್ಪು‌ಆಗಿದೆ. ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಅವಳು. ಒಬ್ಬರನ್ನ ಕೊಲೆ ಮಾಡ್ತಾರೆ ಇದು ಸುಳ್ಳು ಎಂದು ಹೇಳಿದ್ದಾರೆ.

Related