ಬಳ್ಳಾರಿ: ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಲೋಕಸಭಾ ಚುನಾವಣೆ ಟೆನ್ಶನ್ ಮುಗಿಸಿಕೊಂಡು ಇದೀಗ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿ ಇದ್ದಾರೆ. ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾಯ್ತು.. ಇದೀಗ ಮತ್ತೊಂದು ಕಡೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಹೌದು, ಮಾಜಿ ಸಚಿವ ಶ್ರೀರಾಮುಲು ಅವರು ಪೌರಾಣಿಕ ಬಯಲಾಟದಲ್ಲಿ ಕುಣಿದು ಕುಪ್ಪಲಿಸಿದ್ದಾರೆ. ಕಂಪ್ಲಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ ನಡೆದ ಪಾರ್ಥ ವಿಜಯ ಬಯಲುನಾಟಕದಲ್ಲಿ ಶ್ರೀರಾಮುಲು ಅವರು ಬಯಲಾಟ ಉದ್ಘಾಟನೆ ಮಾಡಿದ ಬಳಿಕ ಕುಣಿಸಿ ಕುಪ್ಪಳಸಿ ನೆರೆದಿದ್ದ ಜನರನ್ನು ಸಂತೋಷ ಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು: ಸಿಎಂ
ಗುರುವಾರ ರಾತ್ರಿ ಮೇ 23ರಂದು ಕಂಪ್ಲಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ ನಡೆದ ಬಯಲಾಟದಲ್ಲಿ ಕೈಯಲ್ಲಿ ಖಡ್ಗ ಹಿಡಿದು, ಪಾತ್ರಧಾರಿ ಪಾರ್ಥನ ಜೊತೆಗೆ ಬಾಜ ಬಾಜಂತ್ರಿ ಜೊತೆ ಶ್ರೀರಾಮುಲು ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ಶ್ರೀರಾಮುಲು ಅವರು ಕುಣಿಯುವುದನ್ನು ಕಂಡು ಸಾರ್ವಜನಿಕರು ಶಿಲ್ಲೆ ಹಾಕುವುದರ ಜೊತೆಗೆ ಸಾರ್ವಜನಿಕರು ಕೂಡ ಹೆಜ್ಜೆ ಹಾಕಿದ್ದಾರೆ.