ಕೆಂಪೇಗೌಡ ಅವರು ಎಲ್ಲರ ಆಸ್ತಿ: ಡಿಸಿಎಂ

ಕೆಂಪೇಗೌಡ ಅವರು ಎಲ್ಲರ ಆಸ್ತಿ: ಡಿಸಿಎಂ

ಬೆಂಗಳೂರು: ಕೆಂಪೇಗೌಡರ 515ನೇ ಜಯಂತಿ  ಅಂಗವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಗುರುವಾರ ಜೂನ್‌ 27)  ವಿಧಾನಸೌಧದ ಅವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಇದನ್ನೂ ಓದಿ: ಬಿಬಿಎಂಪಿಯ ಕೇಂದ್ರ ಕಛೇರಿಯಲ್ಲಿ ಕೆಂಪೇಗೌಡರ ಜಯಂತಿ

ಇನ್ನು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಅವರು ಎಲ್ಲರ ಆಸ್ತಿ. ಕೆಂಪೇಗೌಡ ಅವರು ಒಂದೇ ಜಾತಿ, ಒಂದೇ ಧರ್ಮಕ್ಕೆ ಮೀಸಲಾಗದೆ ಎಲ್ಲರನ್ನು ಸಮಾನಾಗಿ ನೋಡಿದ್ದರು. ಅವರು ಕಟ್ಟಿರುವ ಬೆಂಗಳೂರಿನಲ್ಲಿ ನಾವಿದೀಗ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

Related