10 ಲಕ್ಷ ರೂಪಾಯಿ ಹಣ ಗುಳುಂ ಮಾಡಿದ ಬ್ಯಾಂಕ್ ನೌಕರ..!

10 ಲಕ್ಷ ರೂಪಾಯಿ ಹಣ ಗುಳುಂ ಮಾಡಿದ ಬ್ಯಾಂಕ್ ನೌಕರ..!

ಲಿಂಗಸುಗೂರು, ಫೆ. 21: ಸ್ಥಳೀಯ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುವ ನೌಕರನೊಬ್ಬ ಗ್ರಾಹಕರ ಮತ್ತು ಬ್ಯಾಂಕಿನ ಸುಮಾರು 10 ಲಕ್ಷ ರೂ. ಹಣವನ್ನು ಗುಳುಂ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಡಿಸ್ಸಾ ಮೂಲದ ಮುಕೇಶ್ ಕುಮಾರ್ ಮೆಹರ್ ಎನ್ನುವ ಬ್ಯಾಂಕ್ ನೌಕರ 2016ರಿಂದ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಂದಿನಿಂದ ಇಂದಿನವರೆಗೆ ಗ್ರಾಹಕರು ತಮ್ಮ ಆಸ್ತಿಯ ನೋಂದಣಿಯ ಬಗ್ಗೆ ನೊಂದಾಯಿತ ಅಧಿಕಾರಿಗಳಿಗೆ ಕಟ್ಟುವ ಹಣವನ್ನು ಚಾನಲ್ ಮೂಲಕ ಎಸ್ಬಿಐ ಶಾಖೆಯಲ್ಲಿ ಸಂದಾಯ ಮಾಡುತ್ತಿದ್ದ ಸುಮಾರು ಎಂಟರಿಂದ ಹತ್ತು ಲಕ್ಷ ರೂಪಾಯಿ ಹಣವನ್ನು ಸರಕಾರದ ಲೆಕ್ಕಕ್ಕೆ ಜಮಾ ಮಾಡದೇ ತನ್ನ ಸ್ವಂತಕ್ಕಾಗಿ ಬಳಸಿಕೊಂಡು ಮೋಸ ಮಾಡುವ ಜೊತೆಗೆ ಬ್ಯಾಂಕಿಗೂ ನಂಬಿಕೆದ್ರೋಹ ಮಾಡಿದ್ದಾನೆಂದು ಬ್ಯಾಂಕಿನ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಅವರು ನೀಡಿದ ದೂರಿನ ಮೇರೆಗೆ ಪಿಎಸ್ಐ ಪ್ರಕಾಶ್ ರೆಡ್ಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬ್ಯಾಂಕ್ ನೌಕರ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಮತ್ತು ಬ್ಯಾಂಕಿಗೂ ಮೋಸ ಮಾಡಿರುವ ಬಗ್ಗೆ ತನಿಖೆ ಕೈಗೊಂಡು ಆರೋಪಿಯಿಂದ ಹಣ ವಸೂಲಿ ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿದೆ.

ವರದಿ: ಖಾಜಾಹುಸೇನ್

Related