ಸಚಿವ ತಿಮ್ಲಾಪುರ್ ಅವರ ವಿರುದ್ಧ ನಟಿ ಮಾಳವಿಕಾ ವಾಗ್ದಾಳಿ

ಸಚಿವ ತಿಮ್ಲಾಪುರ್ ಅವರ ವಿರುದ್ಧ ನಟಿ ಮಾಳವಿಕಾ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ಸಚಿವ ತಿಮ್ಮಾಪುರ ಅವರು ಶ್ರೀಕೃಷ್ಣನಿಗೆ ಹೊಲಿಸಿ ಮಾತನಾಡಿದ್ದಾರೆ ಇದು ಕಂಡನಿಯ ಮತ್ತು ಹಿಂದುಗಳಿಗೆ ಇದು ನೋವನ್ನುಂಟು ಮಾಡುವ ವಿಚಾರವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಳವಿಕಾ ಅವಿನಾಶ್ ತಿಮ್ಲಾಪು ರವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ ಅಂದ್ರೆ ಬೇಡ ಅದು ಅವರಿಷ್ಟ, ಅದು ಅವರ ಹಕ್ಕು. ಆದರೆ ದೇಶದ ಹಿಂದೂಗಳಿಗೆ ಅವಮಾನ ಮಾಡಲಿಕ್ಕೆ ಕಾಂಗ್ರೆಸ್ ನವರಿಗೆ ಯಾವುದೇ ಹಕ್ಕಿಲ್ಲ ಎಂದು ಮಾಳ್ವಿಕ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ರೀತಿ ಅಶ್ಲೀಲ ವಿಡಿಯೋಗಳನ್ನು , ಶ್ರೀಕೃಷ್ಟನಿಗೆ ಹೋಲಿಸಿ ಮಾತನಾಡುವುದು ನಮ್ಮ ಸನಾತನ ಹಿಂದೂ ಧರ್ಮಕ್ಕೆ ಅವಮಾನವೆಂದು ನಟಿ ಮಾಳ್ವಿಕೆ ಅವರು ಹೇಳಿದ್ದಾರೆ. ತಿಮ್ಲಾಪುರವರ ನಡುವಳಿಕೆಯನ್ನು ನಾವು ಭಾರತೀಯ ಜನತಾ ಪಕ್ಷ ಅತ್ಯಂತ ಕಟು ಶಬ್ದಗಳಿಂದ ಪ್ರತಿರೋಧಿಸುತ್ತೆ ಮತ್ತು ಖಂಡಿಸುತ್ತದೆ ಎಂದರು.

ಸಚಿವರು ಆಡಿದ ಮಾತು ನಾಡಿನ ಸಮಸ್ತ ಹಿಂದೂಗಳ ಭಾವನೆ ಧಕ್ಕೆಯುಂಟು ಮಾಡಿದೆ. ಕಾಂಗ್ರೆಸ್ ನಾಯಕರು ಹಿಂದೂಗಳು ಹಾಗೂ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದನ್ನು ಯಾವುದೇ ಹಿಂದೂ ಸಹಿಸಲಾರ, ಅವರ ಧೋರಣೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದು ಮಾಳವಿಕಾ ಹೇಳಿದರು.

Related