ನಟ ದರ್ಶನ್ ಗೆ ಕಂಟಕದ ಬಗ್ಗೆ ಮುಂಚೆಯೇ ಮುನ್ಸೂಚನೆ ..!?

ನಟ ದರ್ಶನ್ ಗೆ ಕಂಟಕದ ಬಗ್ಗೆ ಮುಂಚೆಯೇ ಮುನ್ಸೂಚನೆ ..!?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪವಿತ್ರ ಗೌಡ ಮತ್ತು ದರ್ಶನಗೆ ಈಗಾಗಲೇ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.

ನಟ ದರ್ಶನ್  ಅವರಿಗೆ ಈ ಮಧ್ಯೆ ಅಪಾಯ ಇದೆ ಅನ್ನೋದು ದರ್ಶನ್​ಗೆ ಮೊದಲೇ ಗೊತ್ತಿತ್ತಾ ಎನ್ನುವ ಪ್ರಶ್ನೆ ಮೂಡಿದೆ.

2 ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ನಕಾರಾತ್ಮಕ ಅಂಶಗಳನ್ನು ನಾಶಮಾಡಲು, ಶತ್ರುಗಳ ಮೇಲೆ ವಿಜಯ ಪ್ರಾಪ್ತಿಗೆ ಅಥವಾ ಮಾಟ-ಮಂತ್ರ ಮಾಡಿಸಿರೋ ಅನುಮಾನ ಇದ್ದರೆ ಈ ಹೋಮ ಮಾಡಿಸಲಾಗುತ್ತದೆ. ದರ್ಶನ್ ಕೂಡ ಇದೇ ಹೋಮ ಮಾಡಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ:

ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.

ಆ್ಯಕ್ಷನ್ ದೃಶ್ಯಗಳನ್ನು ಇಡದಂತೆ ಮಿಲನಾ ಪ್ರಕಾಶ್​ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಜಾಗ್ರತೆ ವಹಿಸಿದರೂ ದರ್ಶನ್​ಗೆ ಪೆಟ್ಟಾಗಿತ್ತು. ಅವರ ಕೈಗೆ ಪೆಟ್ಟಾಗಲು ಇದೂ ಕಾರಣ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ. ಹಣ, ಮಾತು, ಆರೋಗ್ಯ, ಸಾಂಸಾರಿಕವಾಗಿ ಸಮಸ್ಯೆ ತೀವ್ರವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಹಾಗಾದ್ರೆ ನಟ ದರ್ಶನ್ ಅವರಿಗೆ ಇನ್ನು ಎಷ್ಟು ದಿನ ಕಂಠಕ ಇದೇ ಎನ್ನುವುದು ಎಲ್ಲ ದರ್ಶನ್ ಅಭಿಮಾನಿಗಳ ಪ್ರಶ್ನೆಯಾಗಿದೆ.

Related