ಯುವಕ ಜಲ ಸಮಾಧಿ

ಯುವಕ ಜಲ ಸಮಾಧಿ

ಉಪ್ಪಿನಂಗಡಿ,ಫೆ.22 : ಸ್ನೇಹಿತರ ಜೊತೆಗೂಡಿ ಮೀನು ಹಿಡಿಯಲು ಹೊಳೆಗೆ ಹೋಗಿದ್ದ ಯುವಕನೋರ್ವ ಕಾಲು ಜಾರಿ ನೀರು ಪಾಲಾಗಿ ನಾಪತ್ತೆಯಾದ ಘಟನೆ ಶಿರಾಡಿ ಗ್ರಾಮದ ಬಡ್ಚಿನ ಹಳ್ಳದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಬಾಗಿಲಗದ್ದೆ ನಿವಾಸಿ ಹರೀಶ್ (26 ವರ್ಷ) ನೀರುಪಾಲಾದ ವ್ಯಕ್ತಿ.
ಮಧ್ಯಾಹ್ನ ಹರೀಶ್ ಸ್ನೇಹಿತರ ಜೊತೆಗೂಡಿ ಗುಂಡ್ಯ ಹೊಳೆಯಲ್ಲಿ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ. ಮೀನು ಹಿಡಿದು ಹಿಂತಿರುಗುವ ಸಮಯದಲ್ಲಿ ಕಾಲು ಜಾರಿ ನೀರು ಪಾಲಾಗಿದ್ದಾರೆ .

Related