ಆರೋಪಿಗಳನ್ನು ಬಂಧಿಸಿ – ದೇವಿಂದ್ರ ಮುದನೂರ

  • In State
  • August 31, 2021
  • 406 Views
ಆರೋಪಿಗಳನ್ನು ಬಂಧಿಸಿ – ದೇವಿಂದ್ರ ಮುದನೂರ

ಕೆಂಭಾವಿ: ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧನ ಮೂರ್ತಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಮವಾರ ಉಪತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರ (ಡೇವಿಡ್) ಮುದನೂರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿ, ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಮಹಾತ್ಮ ಗೌತಮ್ ಬುದ್ಧರ ಮೂರ್ತಿಯನ್ನು ಧ್ವಂಸ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು. ಸರ್ಕಾರದಿಂದ ಮತ್ತೆ ಮೂರ್ತಿಯನ್ನು ಸ್ಥಾಪನೆ ಮಾಡಿಕೊಟ್ಟು, ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಒತ್ತಾಯಿಸಿದರು.
ರಾಜು ನಾಗರೆಡ್ಡಿ, ಮರೆಪ್ಪ ಮಲ್ಲಾ, ಮರೆಪ್ಪ ಕಟ್ಟಿಮನಿ, ಚಂದ್ರು ಜಲಪುರ, ಯಾಕೂಬ ಭಾಗವಾನ್, ಅಶೋಕ್ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಮಹೇಶ್ ನಾಗರೆಡ್ಡಿ, ಮಡಿವಾಳಪ್ಪ ನಡುವಿನಕೇರಿ, ಮರೆಪ್ಪ ನಾಗರೆಡ್ಡಿ, ಸಚಿನ್ ಜಲಪುರ, ಮಲ್ಲಪ್ಪ ದೊಡಮನಿ, ದತ್ತಾತ್ರೇಯ ದೊರನಹಳ್ಳಿ, ಬಾಗೇಶ್ ಇನ್ನಿತರರಿದ್ದರು.

Related