ಶೇ.12 ರಷ್ಟು ಜಾಹೀರಾತು ದರ ಹೆಚ್ಚಳಕ್ಕೆ ಮನವಿ

ಶೇ.12 ರಷ್ಟು ಜಾಹೀರಾತು ದರ ಹೆಚ್ಚಳಕ್ಕೆ ಮನವಿ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಶೇ.12 ರಷ್ಟು ಜಾಹೀರಾತು ದರ ಹೆಚ್ಚಿಸುವಂತೆ ಕೋರಿ ಇಲಾಖೆಯಿಂದ ಸಲ್ಲಿಕೆಯಾಗಿರುವ ಕಡತಕ್ಕೆ ಅನುಮೋದನೆ ನೀಡುವಂತೆ ಕೋರಿ ಜುಲೈ 3 ರ ಬುಧವಾರ ಮಧ್ಯಾಹ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಕೆ.ವಿ.ತ್ರಿಲೋಕ ಚಂದ್ರ ಅವರನ್ನು ಸಂಘದ ನಿಯೋಗ ಭೇಟಿ ಮಾಡಿ ವಿನಂತಿಸಿದರು. ಇದನ್ನೂ ಓದಿ: ಬಿಜೆಪಿ ಇಡೀ ಹಿಂದೂ ಸಮಾಜಕ್ಕೆ ಅವಮಾನಗೈದಿದೆ: ಸಿಎಂ

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಮಹಮದ್ ಯೂನುಸ್, ಭೀಮರಾಯ ಹದ್ದಿನಾಳ, ಕಾರ್ಯದರ್ಶಿ ಹೆಚ್.ನರಸಿಂಹರಾಜು,  ಸಹ ಕಾರ್ಯದರ್ಶಿಗಳಾದ ಡಾ.ಕೆ.ಎಸ್.ಸ್ವಾಮಿ, ಡಾ.ಬಿ.ವಾಸುದೇವ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ  ಜಿಲ್ಲಾಧ್ಯಕ್ಷ ಬಿ.ಕೆ.ಮಹೇಂದ್ರ ಇದ್ದರು.

Related