ಬಜೆಟೆ ಮಂಡನೆ: ಉದ್ಯಮ ಶಕ್ತಿ ಯೋಜನೆ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆ

ಬಜೆಟೆ ಮಂಡನೆ: ಉದ್ಯಮ ಶಕ್ತಿ ಯೋಜನೆ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆ

ಬೆಂಗಳೂರು: ರಾಜ ಕಾಂಗ್ರೆಸ್ ಸರ್ಕಾರದಲ್ಲಿ 2023-24ನೇ ಸಾಲಿನ ಬಹು ನಿರೀಕ್ಷೆಯುಳ್ಳ ಬಜೆಟ್ ಮಂಡನೆ ಯಾಗಿದ್ದು, ಈ ಬಜೆಟ್ ಮಂಡನೆಯಲ್ಲಿ ಉದ್ಯಮ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೂ ಉದ್ಯೋಗ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡನೆಯಲ್ಲಿ ತಿಳಿಸಿದರು.

ಸಿಎಂ 14ನೇ ಬಾರಿ ಬಜೆಟ್​ ಮಂಡಿಸುವ ಮೂಲಕ ಸಿದ್ಧರಾಮಯ್ಯ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಭಾರಿಯ ಬಜೆಟ್​ನಲ್ಲಿ ಕಂದಾಯ ಇಲಾಖೆಗೆ ಮಹತ್ವ ನೀಡಲಾಗಿದೆ. ಆ ಪೈಕಿ ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ ‘ಉದ್ಯಮ ಶಕ್ತಿ’ ಎಂಬ ಯೋಜನೆ ಅಡಿಯಲ್ಲಿ 100 ಪೆಟ್ರೋಲ್​​ ಬಂಕ್​ಗಳನ್ನು ಸ್ಥಾಪಿಸಲಾಗುತ್ತಿದ್ದು, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಿಸಲ್ಪಡುತ್ತವೆ ಎಂಬುದು ವಿಶೇಷ.

ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದಲ್ಲಿ ‘ಉದ್ಯಮ ಶಕ್ತಿ ಯೋಜನೆ’ ಅಡಿಯಲ್ಲಿ 100 ಬೇರೆ ಬೇರೆ ಸ್ಥಳಗಳಲ್ಲಿ ಪೆಟ್ರೋಲ್​​ ಬಂಕ್​ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮತ್ತು ಅವುಗಳನ್ನು ‘ಮಹಿಳಾ ಸಹಕಾರಿ ಸ್ವಸಹಾಯ ಸಂಘ’ಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.

ಈ ‘ಉದ್ಯಮ ಶಕ್ತಿ’ ಯೋಜನೆ ನಿರ್ಮಾಣಕ್ಕೆ ಪೆಟ್ರೋಲಿಯಂ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ. ಇನ್ನು ರಾಜ್ಯ ಸರ್ಕಾರ ಪೆಟ್ರೋಲ್​ ಬಂಕ್​ ಸ್ಥಾಪನೆಗೆ ಭೂಮಿ ಒದಗಿಸುವುದರ ಜತೆಗೆ ತರಬೇತಿ, ಪರವಾನಗಿ ಮತ್ತು ಇತ್ತರೆ ಅಗತ್ಯಗಳನ್ನು ಒದಗಿಸಲಿದೆ.

Related