ಶಿವರಾಜ್ ಕುಮಾರ್ ಹೆಸರು ಚೇಂಜ್ ಮಾಡ್ಕೊಂತೀನಿ ಎಂದಿದ್ಯಾಕೆ?

ಶಿವರಾಜ್ ಕುಮಾರ್ ಹೆಸರು ಚೇಂಜ್ ಮಾಡ್ಕೊಂತೀನಿ ಎಂದಿದ್ಯಾಕೆ?

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವರಾಜಕುಮಾರ್ ಗೀತಾ ಅವರು ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಅವರು ಕೂಡ ಪ್ರಚಾರದಲ್ಲಿ ತೊಡಗಿರುವ ಅವರು, ಜನಪರ ಕೆಲಸ ಮಾಡಲು ಗೀತಾ ಅವರಿಗೆ ಒಂದು ಒಳ್ಳೆ ಅವಕಾಶವನ್ನು ಮಾಡಿಕೊಟ್ಟಿದ್ದೀರಿ ಅಕಸ್ಮಾತಾಗಿ ಜನ ಪರಾಗಿ ಒಳ್ಳೆ ಕೆಲಸ ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಅವರು ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ.

ಹೌದು, ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ. ಪತ್ನಿ ಗೆದ್ದರೆ ಜನರ ಪರವಾಗಿ ಅವರು ಕೆಲಸ ಮಾಡುತ್ತಾರೆ ಎನ್ನುವ ಭರವಸೆ ನೀಡಿದ್ದಾರೆ. ‘ಗೀತಾಗೆ ಅವಕಾಶ ಕೊಟ್ಟುನೋಡಿ. ಅವರು ಜನರ ಪರವಾಗಿ ಕೆಲಸ ಮಾಡ್ತಾರೆ. ಆ ಬಳಿಕವೂ ಅವರು ಸರಿಯಾದ ಅಭ್ಯರ್ಥಿನ ಆಯ್ಕೆ ಮಾಡಿಲ್ಲ ಎನಿಸಿದರೆ ಹೆಸರು ಚೇಂಜ್ ಮಾಡ್ಕೋತೀನಿ. ಮಾತು ಕೊಟ್ಟಮೇಲೆ ಅದನ್ನು ಫಾಲೋ ಮಾಡ್ತೀವಿ’ ಎಂದು ಶಿವಣ್ಣ ಹೇಳಿದ್ದಾರೆ.

Related