ಪಟ್ಟಣದ ಜನತೆಯ ಬಹುದಿನಗಳ ಕನಸು

ಪಟ್ಟಣದ ಜನತೆಯ ಬಹುದಿನಗಳ ಕನಸು

ಪಾವಗಡ :  ಪಟ್ಟಣದ ಜನತೆಯ ಬಹುದಿನಗಳ ಕನಸು ನನಸಾಗಿದೆ. ಪಟ್ಟಣಕ್ಕೆ ಶಾಶ್ವತವಾಗಿ ಶುದ್ದ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ಸಲುವಾಗಿ ನಾಗಲಮಡಿಕೆ ಡ್ಯಾಂ ನೀರಿನಿಂದ ಅಗಸರಕುಂಟೆ ತುಂಬಿಸುವುದರಿಂದ ಕುಡಿಯುವ ನೀರಿನ ಜೊತೆ ಅಂತರ್ಜಲವು ವೃದ್ದಿಯಾಗಲಿದೆ ಎಂದು ಶಾಸಕ  ವೆಂಕಟರಮಣಪ್ಪ ನುಡಿದರು.

ಉತ್ತರ ಪಿನಾಕಿನಿ ನಾಗಲಮಡಿಕೆ ಡ್ಯಾಂನಿಂದ ಪಾವಗಡಕ್ಕೆ ಕುಡಿಯುವ ನೀರು ೫೦ ಲಕ್ಷ ಲೀ ಸಾರ‍್ಥ್ಯದ ಪಾವಗಡದ ಒವರ್ ಹೆಡ್ ಟ್ಯಾಂಕ್ ಮತ್ತು ಅಗಸರ ಕುಂಟೆಗೆ ಕೃಷ್ಣಾ ನದಿ ನೀರು ಸರಬರಾಜು ಆಗಿದ್ದು ಪಟ್ಟಣದ ಎಲ್ಲಾ ವಾರ್ಡ್ಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು

ಪುರಸಭೆ ನಿಧಿಯಿಂದ ೬೦ ಲಕ್ಷ ಮೊತ್ತದಲ್ಲಿ ಹೊಸ  ಪೈಪ್ ಲೈನ್ ಮತ್ತು ದುರಸ್ತಿ  ಕೈಗೊಳ್ಳುವುದಾಗಿ ತಿಳಿಸಿದರು. ಇದರಿಂದ  ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ಶೇಖರಣೆಗೊಂಡು, ಕುಡಿಯುವ ನೀರನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ  ಪುರಸಭಾ ಸದಸ್ಯರಾದ ಸುದೇಶ್ ಬಾಬು, ಮೊಹಮ್ಮದ್ ಇಮ್ರಾನ್, ನಾಗಭೂಷಣರೆಡ್ಡಿ, ವೇಲುರಾಜು, ರಾಮಾಂಜಿನಪ್ಪ, ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮುಖಂಡ  ಪ್ರಮೋದ್ ಕುಮಾರ್ ಇದ್ದರು.

Related