ಶಾಸಕರ, ಬೆಂಬಲಿಗರ ಸೆಣಸಾಟ

ಶಾಸಕರ, ಬೆಂಬಲಿಗರ ಸೆಣಸಾಟ

ಮಂಡ್ಯ : ಎಲ್ಲೆಡೆ ಕೋವಿಡ್ ಸೋಂಕು ಮಣಿಸಲು ಹೋರಾಟ ನಡೆಯುತ್ತಿದೆ. ಆದರೆ, ಶ್ರೀರಂಗಪಟ್ಟಣದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಸ್ವಪ್ರತಿಷ್ಠೆಯ ಸೆಣಸಾಟ ಶುರುವಾಗಿದೆ.

ಕೊರೋನಾ ಆತಂಕದ ನಡುವೆಯೂ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಬೆಳಗ್ಗೆ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಪರಸ್ಪರ ಅಂತರ ಮರೆತು, ಮಾಸ್ಕ್ ಧರಿಸದೆ ಗುಂಪು ಸೇರಿ ಗಲಾಟೆ ಮಾಡಿಕೊಂಡರು.

ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ವಾಣಿಜ್ಯ ಮಳಿಗೆ ಉದ್ಘಾಟನೆ ಮಾಡಲು ಬಂದ ಮಾಜಿ ಶಾಸಕ ರಮೇಶ್ ಬಂಡ್ಡೀಸಿದ್ದೇಗೌಡರನ್ನು ತಡೆದ ಹಾಲಿ ಶಾಸಕರ ಬೆಂಬಲಿಗರು, ಶಾಸಕರಿಂದ ಉದ್ಘಾಟನೆ ಮಾಡಿಸದೆ ಮಾಜಿ ಶಾಸಕರಿಗೆ ಆಹ್ವಾನಿಸಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Related