ಸಾಲಕ್ಕೆ ಆತ್ಮಹತ್ಯೇವೊಂದೇ ಪರಿಹಾರವಲ್ಲ

  • In State
  • August 31, 2021
  • 422 Views
ಸಾಲಕ್ಕೆ ಆತ್ಮಹತ್ಯೇವೊಂದೇ ಪರಿಹಾರವಲ್ಲ

ಶಹಾಪುರ : ನಗರದ ಹಳಿಸಗರ ಬಡಾವಣೆಯ ಯುವ ರೈತ ನಿಂಗಣ್ಣ ಹಳಿಸಗರ(32) ಸಾಲಬಾಧೆಯಿಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಮೃತ ರೈತನ ಕುಟುಂಬಕ್ಕೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಾಂತ್ವಾನ ಹೇಳಿದರು.

ಮೃತ ರೈತನಿಗೆ ಮೂರು ಮಕ್ಕಳಿದ್ದು, ಹಿರಿಯ ಮಗಳು ವಿದ್ಯಾವಂತೆಯಾಗಿದ್ದರಿಂದ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ನೇಮಕ ಮಾಡಿಕೊಳ್ಳುವುದರ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸರ್ಕಾರದಿಂದ ನಿಮ್ಮಗೆ ದೊರಕ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತೇನೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುನಾಥರೆಡ್ಡಿ ಪಾಟೀಲ್ ಹಳಿಸಗರ, ಸಣ್ಣ ನಿಂಗಣ್ಣ ನಾಯ್ಕೋಡಿ, ವೆಂಕಟರೆಡ್ಡಿಗೌಡ ಪಾಟೀಲ್ ಹಳಿಸಗರ, ಬಸವರಾಜ ಪಾಟೀಲ್ ಹೆರುಂಡಿ, ಶಾಂತಪ್ಪ ಕಟ್ಟಿಮನಿ, ಶರಣಪ್ಪ ಮುಂಡಾಸ್, ನಗರಸಭೆ ಸದಸ್ಯರು, ಗ್ರಾಮದ ಮುಖಂಡರು ಇನ್ನಿತರರಿದ್ದರು.

Related