ಲಕ್ಷ್ಮಣ್ ಸವದಿಗೆ ಸಂಸದ ಸಂಜಯ್ ತಿರುಗೇಟು

ಲಕ್ಷ್ಮಣ್ ಸವದಿಗೆ ಸಂಸದ ಸಂಜಯ್ ತಿರುಗೇಟು

ಮುಂಬೈ : ಶಿವಸೇನೆ ಸಂಸದ ಸಂಜಯ್ ರಾವತ್ ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿಕೆಗೆ ತಿರುಗೇಟು ನೀಡಿದ್ದು, ಮೊದಲು ಇತಿಹಾಸವನ್ನು ಅರ್ಥಮಾಡಿಕೊಳ್ಳಲಿ. ಮುಂಬೈನಲ್ಲಿ ಕನ್ನಡಿಗರಿಗೆ ಬೇಧ-ಭಾವ ಮಾಡಲಾಗುತ್ತಿಲ್ಲ ಎಂದು ಹೇಳಿದರು.

ಈ ಕುರಿತು ಕಿಡಿ ಕಾರಿರುವ ರಾವತ್ ಮುಂಬೈನಲ್ಲಿ ಕನ್ನಡ ಶಾಲೆ ಇದ್ದು, ಒಂದು ಸಂಸ್ಥೆ ಸಹ ಇದೆ. ಆದರೆ ಬೆಳಗಾವಿಯಲ್ಲಿ ಈ ಪರಿಸ್ಥಿತಿ ಇಲ್ಲ. ಮುಂಬೈನಲ್ಲಿರುವ ಕನ್ನಡಿಗರು ಬೆಳಗಾವಿಗೆ ಬರಬೇಕು ಎಂಬುದು ಸವದಿ ಅವರ ಅಭಿಲಾಷೆಯಾಗಿದೆ. ಕರ್ನಾಟಕ ಸರ್ಕಾರಕ್ಕೆ ನೆನಪಿರಲಿ, ಈಗ ಇಲ್ಲಿರುವುದು ಠಾಕ್ರೆ ಸರ್ಕಾರವೆಂಬುದು ಎಂದು ಟಾಂಗ್ ನೀಡಿದರು.

ಇದಕ್ಕೂ ಮುನ್ನ ಲಕ್ಷ್ಮಣ ಸವದಿ ಅವರು ಮಾತನಾಡಿ ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು. ಅದು ಆಗುವವರೆಗೂ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ನಾನು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.

Related