ತಡೆಗೋಡೆ ನಿರ್ಮಿಸಲು ಮನವಿ

ತಡೆಗೋಡೆ ನಿರ್ಮಿಸಲು ಮನವಿ

ಚಿಂಚೋಳಿ: ಪಟ್ಟಣದ ಮುಲ್ಲಾಮಾರಿ ನದಿ ಭೋವಿಗಲ್ಲಿಯಿಂದ ಹರಿಜನ ವಾರ್ಡ್‍ವರೆಗೆ, ದೊಡ್ಡ ಬ್ರಿಡ್ಜ್‍ಯಿಂದ ಹನುಮಾನ್ ಮಂದಿರದವರೆಗೆ ತಡೆಗೋಡೆ ನಿರ್ಮಿಸಲು ಸಂಸದ ಡಾ. ಉಮೇಶ ಜಾಧವ ಅವರ ಮೂಲಕ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ನೀರು ಹರಿಯಲು ನದಿಯಲ್ಲಿ ಹೂಳು ತೆಗೆಯಲು ಒಪ್ಪಿಗೆ ನೀಡಿದ್ದು, ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳುತ್ತೇನೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ವಕ್ತಾರ ಶ್ರೀಮಂತ ಕಟ್ಟಿಮನಿ, ಅಮರ್ ಲೋಡ್ಡನೋರ ಇದ್ದರು.

Related