ರೈತನ ಕುಟುಂಬಕ್ಕೆ ಪರಿಹಾರ

ರೈತನ ಕುಟುಂಬಕ್ಕೆ ಪರಿಹಾರ

ಕಲಬುರಗಿ : ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದಲ್ಲಿ ಸೇತುವೆಯಲ್ಲಿ ಕೊಚ್ಚಿ ಹೋದ ಪೀರಶೇಟ್ಟಿ ಪೂಜಾರಿ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಿಸಿದರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸೇತುವೆ ಬಳಿ ಭೇಟಿ ನೀಡಿ, ದುರಸ್ತಿ ಮಾಡುವ ಕುರಿತು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಸ್ತುತ ತಾತ್ಕಾಲಿಕ ದುರಸ್ತಿ ಮಾಡಿ, ಶಾಶ್ವತ ಪರಿಹಾರಕ್ಕೆ ಸೂಚನೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಮಲಾಪುರ ತಹಶೀಲ್ದಾರ್ ಅಂಜುಮ್ ತಬಸುಮ್ ಸಂಗಮೇಶ ವಾಲಿ, ಸಿದ್ದಣಗೌಡ ಪಾಟೀಲ್ ರಾಮರತನ ಪಾಟೀಲ್ ಕಲ್ಯಾಣರಾವ ಪಾಟೀಲ ಸತೀಶ್ ಸೋರಡೆ ವಿಶ್ವನಾಥ್ ಗೋಧಿ ವೀರೇಶ ಉಪಳಾಂವಕರ, ಹರ್ಷವರ್ಧನ್ ಗೋಗ್ಳೆ,ವಿನೋದ್ ಪಾಟೀಲ ಸರಡಗಿ ವಿಶ್ವನಾಥ್ ವೆಂಕಟೇಬೆನೂರ ರವಿರಾಜ ಲಿಂಗನವಾಡಿ ಶಶಿಧರ ಮಾಕಾ ಸುರೇಶ ರಾಠೋಡ ಸೇರಿ ಪ್ರಮುಖರು ಜೊತೆಗಿದ್ದರು

Related