ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ದೊಡ್ಡಬಳ್ಳಾಪುರ: ನಗರ ಬ್ಲಾಕ್ ನೂತನ ಅಧ್ಯಕ್ಷರಾಗಿ ಕೆ.ಪಿ. ಜಗನ್ನಾಥ್, ತಾಲೂಕು ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಂ. ರಾಮು, 3 ಕಾರ್ಮಿಕ ವಿಭಾಗದ ಜಿಲ್ಲಾ ಕಾರ್ಯ ಅಧ್ಯಕ್ಷರಾಗಿ ಶಂಕರಪ್ಪ, ತಾಲೂಕು ಅಧ್ಯಕ್ಷರಾಗಿ ಐಎನ್‌ಟಿಯು ಎಲ್. ಅಕ್ಮಲ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವೆಂಕಟರಮಣಯ್ಯ ನೂತನವಾಗಿ ಅಧ್ಯಕ್ಷರಾದ ಅವರಿಗೆ ಪ್ರಮಾಣ ಪತ್ರ ನೀಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿದರು.
ಜನರ ಸೇವೆಯೇ ಜನಾರ್ಧನ ಸೇವೆ ಎಂದು ಅವರವರ ವ್ಯಾಪ್ತಿಗೆ ಬರುವ ಕ್ಷೇತ್ರಗಳಲ್ಲಿ ಜನಪರ ಕಾಳಜಿ ವಹಿಸಿ ಕೆಲಸಗಳನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾ ವರುಣ್, ಆರ್.ಜಿ. ಶ್ರೀವತ್ಸ, ಮಾಜಿ ಅಧ್ಯಕ್ಷ, ತಾ.ಪಂ ಅಧ್ಯಕ್ಷರು ಜಿ .ಲಕ್ಷ್ಮೀಪತಿ, ಕೆಪಿಸಿಸಿ ಸದಸ್ಯರು, ಅಪ್ಪಿ ವೆಂಕಟೇಶ್ ಕಸಬಾ ಬ್ಲಾಕ್, ಕಾಂಗ್ರೆಸ್ ಅಧ್ಯಕ್ಷ ಬೈರೆಗೌಡ್ರು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತ್ ಕುಮಾರ್, ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣ್ ಗೌಡ್ರು, ತಾ.ಪಂ ಅಧ್ಯಕ್ಷ ಟಿ. ರಂಗರಾಜು, ಎಪಿಎಮ್‌ಸಿ ಅಧ್ಯಕ್ಷ ಜಿ ರಾಜಣ್ಣ ಕಾರ್ಯದರ್ಶಿ, ನಿವೇದಿತಾ ಆಂಗ್ಲ ಶಾಲೆಯ ರಂಗಸ್ವಾಮಿ, ವನ್ನಿಕುಲ ಸಂಘದ ಮುಖಂಡೆ ನಾಗರತ್ನಮ್ಮ ಇದ್ದರು.

Related