ಗಣೇಶನ ದರ್ಶನ ಪಡೆದ ಸಚಿವ ಪ್ರಭು ಚವ್ಹಾಣ್

ಗಣೇಶನ ದರ್ಶನ ಪಡೆದ ಸಚಿವ ಪ್ರಭು ಚವ್ಹಾಣ್

ಔರಾದ :ಇಡೀ ಜಗತ್ತಿಗೆ ಕೋವಿಡ್-19 ಸೋಂಕು ಸಾಕಷ್ಟು ಕಾಡುತ್ತಿದೆ. ನಮ್ಮ ನಾಡಿನಿಂದ ಈ ಸೋಂಕನ್ನು ಹೊಡೆದೋಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕೆಲಸಕ್ಕೆ ಕೈಜೋಡಿಸಬೇಕೆಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದರು.
ಬೀದರ ನಗರದ ಕೆ.ಇ.ಬಿ ಹತ್ತಿರ ಯುವ ಹಿಂದೂ ಸೇನಾ ಗಣೇಶ ಮಂಡಳ ಹಾಗೂ ಬಾಲ ಹನುಮಾನ ಗಣೇಶ ಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶನ ದರ್ಶನ ಪಡೆದು ಮಾತನಾಡಿದರು.
ಗಣೇಶ ವಿಸರ್ಜನೆ ಕಾರ್ಯಕ್ರಮವನ್ನು ಅದ್ಧೂರಿತನವಿಲ್ಲದೇ ಯಾವುದೇ ಆಡಂಬರಗಳಿಗೆ ಆಸ್ಪದ ಕೊಡದೇ ಸರಳ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಆಚರಿಸಬೇಕು, ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ರೂಪಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಮನವಿ ಮಾಡಿದರು.
ನಗರದ ವಿವಿಧೆಡೆ ಸಂಚರಿಸಿ ಗಣೇಶ ಪ್ರತಿಷ್ಠಾಪನಾ ಸ್ಥಳಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಬೀದರ ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಉಪಾಧ್ಯಕ್ಷ ಬಸವರಾಜ ಪವಾರ, ಮುಖಂಡರಾದ ಅರಹಂತ ಸಾವಳೆ, ವಿರಶೆಟ್ಟಿ ಖ್ಯಾಮಾ ಇನ್ನಿತರರಿದ್ದರು.

Related