ಪೊಲೀಸರ ಗಂಟಲು ದ್ರವ ಸಂಗ್ರಹ

ಪೊಲೀಸರ ಗಂಟಲು ದ್ರವ ಸಂಗ್ರಹ

ಮುದ್ದೇಬಿಹಾಳ : ಪಟ್ಟಣದ ಶಿವಾಚಾರ್ಯ ಕಾಲೇಜಿನ ಕ್ವಾರಂಟೈನ್ ಕೇಂದ್ರದಲ್ಲಿ ಸಿಪಿಐ ಆನಂದ ವಾಘಮೋಡೆ ಅವರ ಗಂಟಲು ಮಾದರಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಗ್ರಹಿಸಿದರು.

ಇದೇ ವೇಳೆ ಕೊರೋನಾ ವಾರಿಯರ್ಸ್‍ಗಳಾದ ಕ್ರೈಂ ಪಿಎಸೈ ಟಿ.ಜೆ.ನೆಲವಾಸಿ ಹಾಗೂ 23 ಜನ ಪೊಲೀಸರು, ಮೂವರು ಗೃಹರಕ್ಷಕ ದಳದ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಯಿತು. ಕ್ವಾರಂಟೈನ್ ಕೇಂದ್ರದಲ್ಲಿ ಅಗತ್ಯ ಸುರಕ್ಷಿತ ಸಾಧನಗಳನ್ನು ಬಳಸಿಕೊಂಡು ಪೊಲೀಸರ ಸ್ವ್ಯಾಬ್ ಸಂಗ್ರಹಿಸಲಾಯಿತು.

ಡಾ.ಸತೀಶ್ ತಿವಾರಿ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಹಿರಿಯ ಪ್ರಯೋಗಾಲಯ ತಜ್ಞರಾದ ಈರಣ್ಣ ಚಿನಿವಾರ, ವಿಜಯಮಹಾಂತೇಶ್ ಪವಾಡೆಶೆಟ್ಟಿ, ಆನಂದ ಬಿರಾದಾರ, ಸಚಿನ್ ರೂಢಗಿ ಸ್ವ್ಯಾಬ್ ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಿದರು.

Related