ಪ್ರಧಾನ ಮಂತ್ರಿ ಹುದ್ದೆ ಆಟಿಕೆಯ ವಸ್ತು ಅಲ್ಲ: ಅಣ್ಣಾಮಲೈ

ಪ್ರಧಾನ ಮಂತ್ರಿ ಹುದ್ದೆ ಆಟಿಕೆಯ ವಸ್ತು ಅಲ್ಲ: ಅಣ್ಣಾಮಲೈ

ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಗೆ ದಿನ ಗಣನೆ ಪ್ರಾರಂಭವಾಗಿದ್ದು ನಿನ್ನೆ ಶಿವಮೊಗ್ಗ ಲೋಕಸಭಾ ಕ್ಷೇರ್ತದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಪರವಾಗಿ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಮಲೈ ಅವರು ಬೃಹತ್ ರ್ಯಾಲಿ ಮಾಡುವ ಮೂಲಕ ಮತ ಪ್ರಚಾರ ಮಾಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಒಬ್ಬ ಪ್ರಧಾನಿಮಂತ್ರಿ ಯಾಗಬೇಕಾದರೆ ಅವರಿಗೆ, ಅವರದೇ ಅರ್ಹತೆಗಳಿರುತ್ತವೆ. ಅರ್ಹತೆ, ಯೋಗ್ಯತೆ ಮೀರಿ ಪ್ರಧಾನಿ ಹುದ್ದೆಗೆ ಆಸೆ ಪಡೋದು ಒಳಿತಲ್ಲ ಎಂದು ಹೇಳಿದ್ದಾರೆ

ಪ್ರಧಾನಿಮಂತ್ರಿಯಾಗಲು ಅರ್ಹತೆ ಮತ್ತು ಯೋಗ್ಯತೆ ಬೇಕು, ಆ ಯೋಗ್ಯತೆ ಇಂಡಿಯ ಒಕ್ಕೂಟದ ಒಬ್ಬ ನಾಯಕನಲ್ಲೂ ಇಲ್ಲ ಎಂದು ಹೇಳಿದರು. ಪ್ರಧಾನ ಮಂತ್ರಿ ಹುದ್ದೆ ಆಟಿಕೆಯ ವಸ್ತು ಅಲ್ಲ, ಅಥವಾ ಒಂದು ಕಿಂಡರ್ಗಾರ್ಟನ್ ಶಾಲೆಯ ಟೀಚರ್ ಆದಂತಲ್ಲ ಎಂದ ಅಣ್ಣಾಮಲೈ, ದೇಶದಲ್ಲಿ ಪ್ರಧಾನಮಂತ್ರಿಯಯಾಗುವ ಯೋಗ್ಯತೆ ಕೇವಲ ನರೇಂದ್ರ ಮೋದಿಯವರಿಗಿದೆ, ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲೆಂದೇ ನಿಮ್ಮ ಸಹಕಾರ ಕೋರಲು ಬಂದಿದ್ದೇವೆ ಎಂದರು.

ವಿರೋಧ ಪಕ್ಷಗಳ ಒಕ್ಕೂಟದಲ್ಲಿ, ಫರೂಕ್ ಅಬ್ದುಲ್ಲಾ ಮಮತಾ ಬ್ಯಾನರ್ಜೀ, ರಾಹುಲ್ ಗಾಂಧಿ, ಎಂಕೆ ಸ್ಟಾಲಿನ್ ಮೊದಲಾದವರೆಲ್ಲ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ, ಅದರೆ ಅವರ ಕನಸು ಯಾವತ್ತೂ ನನಸಾಗಲ್ಲ ಎಂದು ಅವರು ಹೇಳಿದರು.

Related