ಹುತಾತ್ಮರಿಗೆ ಶ್ರದ್ಧಾಂಜಲಿ

ಹುತಾತ್ಮರಿಗೆ ಶ್ರದ್ಧಾಂಜಲಿ

ಪಾವಗಡ:ಭಾರತ ದೇಶದ ಗಡಿ ರಕ್ಷಣೆಗಾಗಿ ಚೀನಾ ದೇಶದ ಸೈನಿಕರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ಭಾರತಾಂಬೆಯ ಸುಪುತ್ರರಾದ ಹುತಾತ್ಮಯೋಧರ ತ್ಯಾಗ ಬಲಿದಾನಗಳನ್ನು ಗೌರವಿಸುವ ಸಲುವಾಗಿ ಪಾವಗಡದ ಹೆಲ್ಪ್ ಸೊಸೈಟಿವತಿಯಿಂದ ಪಾವಗಡ ಶನಿಮಹಾತ್ಮ ಸರ್ಕಲ್ ನಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮತ್ತು ಈ ಸಂಧರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ಅವರು ಸ್ವದೇಶಿ ವಸ್ತು ಬಳಸಿ ವಿದೇಶಿ ವಸ್ತು ತ್ಯಜಿಸಿ ಎಂದು ಘೋಷಣೆ ಮಾಡಿ ಚೀನಾ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಡಾಕ್ಟರ್ ಶ್ರೀಕಾಂತ್ ಪುರಸಭೆ ಸದಸ್ಯರು ವಿಶ್ವನಾಥ್ ನಾಗರಾಜ್ ರೋಟರಿ ಪ್ರಭಾಕರ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರು ಕಮಲ್ ಬಾಬು ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷರು ಕುಮಾರ್ ಬೀದಿ ಬದಿ ವ್ಯಾಪಾರ ಮಹಿಳಾ ಅಧ್ಯಕ್ಷರು ಶಶಿ ಕಾಂಗ್ರೆಸ್ ಮುಖಂಡರು ರಿಜ್ವಾನ್ ಉಲ್ಲಾ ನಮ್ಮ ಹಕ್ಕು ಅಧ್ಯಕ್ಷರು ಗಿರೀಶ್ ಬೇಕರಿ ನಾಗರಾಜ್ ವಿಶಾಲ್ ಪ್ರಜ್ವಲ್ ಸಾಗರ್ ಅನಿಲ್ ಕುಮಾರ್ ಆಟೋ ಚಾಲಕರು ಹೆಲ್ಪ್ ಸೊಸೈಟಿಯ ಸದಸ್ಯರುಗಳು ಸಾರ್ವಜನಿಕರು ಇನ್ನು ಮುಂತಾದವರು ಇದ್ದರು

Related