ತಡೆರಹಿತ ಬಸ್ ನಿಲುಗಡೆ ಮಾಡದ ಕ್ರಮಕ್ಕೆ ಆಕ್ರೋಶ

ತಡೆರಹಿತ ಬಸ್ ನಿಲುಗಡೆ ಮಾಡದ ಕ್ರಮಕ್ಕೆ ಆಕ್ರೋಶ

ಕಮಲಾಪುರ : ಕಲಬುರ್ಗಿ ಜಿಲ್ಲೆ ತಡೆರಹಿ ಬಸ್ ನಿಲುಗಡೆ ಮಾಡಬೇಕು ಎಂಬ ಆದೇಶ ಇದ್ದರೂ ಬಸ್ ನಿಲ್ಲಿಸದ ಧೋರಣೆ ಖಂಡಿಸಿ ಸಾರ್ವಜನಿಕರು ತಾಲೂಕು ಕೇಂದ್ರ ಕಮಲಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಈಚೆಗೆ ತಡೆರಹಿತ ಬಸ್‌ಗಳ ನಿಲುಗಡೆಗೆ ಆದೇಶ ಹೊರಡಿಸಲಾಗಿದರ. ಆದರೆ, ಬಸ್ ಚಾಲಕ ನಿರ್ವಾಹಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ. ಇದರಿಂದ ಕೆರಳಿದ ಪ್ರಯಾಣಿಕರು ಬೆಳಿಗ್ಗೆಯಿಂದ ತಡೆ ರಹಿತ ಬಸ್ ಗಳನ್ನು ಕಮಲಾಪುರದಲ್ಲಿ ತಡೆದರು.

ಎಲ್ಲ ಬಸ್‌ಗಳಿಗೆ ಅಂತರರಾಜ್ಯದ ನಾಮಫಲಕ ಹಾಕಿಕೊಂಡು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಯಾಮಾರಿಸುತ್ತಿದ್ದಾರೆ. ವಿನಾಕಾರಣ ಚಾಲಕ, ನಿರ್ವಾಹಕರು ತೊಂದರೆ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಗುರು ಮಾಟೂರ, ಅಮರ ಚಿಕ್ಕೇಗೌಡ, ಅರುಣ ದೋಶೆಟ್ಟಿ, ರಾಮಲಿಂಗ ಗುತ್ತೇದಾರ ಆರೋಪಿಸಿದರು.

Related