`ನಳಿನ ಕುಮಾರ್ ನಾಯಕತ್ವದಲ್ಲಿ : ಯುವತೆಗೆ ಆದ್ಯತೆ’

`ನಳಿನ ಕುಮಾರ್ ನಾಯಕತ್ವದಲ್ಲಿ : ಯುವತೆಗೆ ಆದ್ಯತೆ’

ಕೆಂಭಾವಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟಿಲ್ ಅಧ್ಯಕ್ಷತೆಯಲ್ಲಿ ಪಕ್ಷ ಕಳೆದ ಎರಡು ವರ್ಷಗಳಲ್ಲಿ ಅನೇಕ ಚುನಾವಣೆಗಳಲ್ಲಿ ವಿಜಯಿಶಾಲಿಯಾಗಿದೆ. ಇವರ ನಾಯಕತ್ವಕ್ಕೆ ಕಾರ್ಯಕರ್ತರು ಹಾಗೂ ಜನರು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಶ್ರೀನಿವಾಸರೆಡ್ಡಿ ಪಾಟೀಲ ಯಾಳಗಿ ಹೇಳಿದರು. ಪಟ್ಟಣದ ಸಂಜೀವನಗರದ ಆಂಜನೇಯ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟಿಲ್ ಅವರ ಎರಡು ವರ್ಷ ಪೂರೈಸಿದ ನಿಮಿತ್ತ ಶನಿವಾರ ವಿಶೇಷ ಪೂಜೆ ಮಾಡಿಸಿ ಕಾರ್ಯಕರ್ತರಿಗೆ ಸಿಹಿ ಹಂಚಿ ಮಾತನಾಡಿದರು. ಕಟಿಲ್ ರಾಜ್ಯಾಧ್ಯಕ್ಷರಾದ ನಂತರ ಅನೇಕ ಯುವ ಮುಖಗಳಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಇವರ ಅವಧಿಯಲ್ಲಿ ನಡೆದ ಅನೇಕ ಉಪ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಿದೆ. ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳಿಗೆ ಈಗಾಗಲೇ ತಾಲೀಮು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ಸಂಗಣ್ಣ ತುಂಬಗಿ, ರಾಮನಗೌಡ ಅಸಂತಾಪುರ, ಶಿವಣ್ಣ ಬಳಬಟ್ಟಿ, ಶಂಕರ ಕರಣಗಿ, ಉಮೇಶರೆಡ್ಡಿ, ಮಲ್ಕಣ್ಣ ಮುದನೂರ, ಉಮೇಶ ಮಿರ್ಜಿ, ಹಳ್ಳೆಪ್ಪ ಕವಾಲ್ದಾರ, ನಂದಪ್ಪ ಕವಾಲ್ದಾರ, ಬಾಬುಗೌಡ, ಭೀಮು ಧರಿ, ಆನಂದ ಸೊನ್ನದ, ಮಂಜು, ಭೀಮನಗೌಡ, ಸಂತೋಷ ಬಿಂಜಲಬಾವಿ, ರಾಮನಗೌಡ, ಪ್ರಶಾಂತ ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.

Related