ಕೆಸರಿನ ಗದ್ದೆಯಾದ ರಸ್ತೆಗಳು

  • In State
  • September 1, 2021
  • 518 Views
ಕೆಸರಿನ ಗದ್ದೆಯಾದ ರಸ್ತೆಗಳು

ಚಿಂಚೋಳಿ : ಕನಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಜಲಪುರ ಮತ್ತು ಮರಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕೆಸರಿನ ಗದ್ದೆಯಾಗಿದೆ ಎಂದು ದಲಿತ ಸೇನೆಯ ತಾಲ್ಲೂಕ ಸಂಘಟನಾ ಕಾರ್ಯದರ್ಶಿ ಸುರೇಶ ರಾಣಾಪುರ ಹೇಳಿದರು.
ರಸ್ತೆ ಹದಗೆಟ್ಟಿದ್ದರಿಂದ ಗ್ರಾಮದ ನಿವಾಸಿಗಳು ಪ್ರತಿದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ತಾಜಲಾಪುರ್ ಗ್ರಾಮಸ್ಥರ ಸಂಕಷ್ಟ ನಿವಾರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ದಲಿತ ಸೇನೆ ತಾಲೂಕು ಸಂಘಟನಾ ಕಾರ್ಯದರ್ಶಿ ಸುರೇಶ ರಾಣಪುರ, ದಲಿತ ಸೇನೆ ತಾಲೂಕು ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಬಲವಂತ ಚನ್ನೂರ್, ಶ್ರೀಧರ್ ವಗ್ಗಿ ಇದ್ದರು.

Related