ಕಾರ್ಮಿಕರ ಕರೆತರಲು ಗೋವಾ ಗಡಿಗೆ ಶಾಸಕ ನಡಹಳ್ಳಿ ಪ್ರಯಾಣ

ಕಾರ್ಮಿಕರ ಕರೆತರಲು ಗೋವಾ ಗಡಿಗೆ ಶಾಸಕ ನಡಹಳ್ಳಿ ಪ್ರಯಾಣ

ಮುದ್ದೇಬಿಹಾಳ : ಗೋವಾ ರಾಜ್ಯಕ್ಕೆ ವಲಸೆ ಹೋಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಕೂಲಿಕಾರ್ಮಿಕರನ್ನು ಕರೆತರಲು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ.

ಗೋವಾ ರಾಜ್ಯಕ್ಕೆ ದುಡಿಯಲು ಹೋಗಿರುವ ನಾಲ್ಕು ಸಾವಿರ ಕೂಲಿ ಕಾರ್ಮಿಕರನ್ನು ಕರೆತರಲು ಬೇಕಾದ ವ್ಯವಸ್ಥೆಯನ್ನು ಅಲ್ಲಿನ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲು ಹಾಗೂ ಗೋವಾ-ಕರ್ನಾಟಕ ಗಡಿಯಲ್ಲಿ ನಿಂತು ಕಾರ್ಮಿಕರು ತಮ್ಮ ಊರಿಗೆ ಬರಲು ಆಗಬೇಕಾದ ವ್ಯವಸ್ಥೆಯನ್ನು ಮಾಡಲು ಶಾಸಕ ನಡಹಳ್ಳಿ ತೆರಳಿದ್ದಾರೆ.

ಈ ಕುರಿತು ಅವರೇ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಶಾಸಕರು, ರಾಜ್ಯ ಸರಕಾರ ಈಗಾಗಲೇ ಬೆಂಗಳೂರು,ಮಂಗಳೂರು ಮತ್ತಿತರ ಅಂತರಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಮಿಕರನ್ನು ಕರೆತರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಜನ ಮೆಚ್ಚುಗೆಗೆ ಕಾರಣವಾಗಿದೆ.

ಅಂತರರಾಜ್ಯ  ಕಾರ್ಮಿಕರಿಗೂ ಪ್ರಯಾಣವನ್ನು ಉಚಿತವಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ.ಸಿಎಂ ಬಿ.ಎಸ್.ಯಡಿಯೂರಪ್ಪ,ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಉಚಿತ ಸಾರಿಗೆ ಒದಗಿಸುವಂತೆ ಅವರು ವಿನಂತಿಸಿರುವುದಾಗಿ ಹೇಳಿಕೊಂಡಿದ್ದಾರೆ.

Related