ಸಂಸದ ಖೂಬಾ ಟೀಕಾಸ್ತ್ರ

ಸಂಸದ ಖೂಬಾ ಟೀಕಾಸ್ತ್ರ

ಬೀದರ್ : ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರೋಧ ಪಕ್ಷದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೇ ಸರ್ಕಾರ ಮಾಡಿರುವ ವೆಂಟಿಲೇಟರ್ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಭಗವಂತ ಖೂಬಾ ಟೀಕಿಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ, ಆತ್ಮನಿರ್ಭರ ಯೋಜನೆಗಳ ಲಾಭ ಜಿಲ್ಲೆಯ ಜನ ಪಡೆದುಕೊಳ್ಳಬೇಕು’ ಎಂದರು. ‘ಯಾವ ಯಾವ ವೃತ್ತಿಗೆ ಹಣಕಾಸಿನ ನೆರವು ಕೊಡಲು ಸಾಧ್ಯವಿದೆಯೋ ಪಟ್ಟಿ ತಯಾರಿಸಿ ವರದಿ ಕೊಡುವಂತೆ ಈಗಾಗಲೇ ಜಿಲ್ಲಾ ಕೈಗಾರಿಕೆ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದರು.

Related