ಸೌಮ್ಯ ರೆಡ್ಡಿ ಪರವಾಗಿ ಶಾಸಕ ಎಂ ಕೃಷ್ಣಪ್ಪ ಮತ ಬೇಟೆ

ಸೌಮ್ಯ ರೆಡ್ಡಿ ಪರವಾಗಿ ಶಾಸಕ ಎಂ ಕೃಷ್ಣಪ್ಪ ಮತ ಬೇಟೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ಬೆಂಕಿಯ ಕೆಂಡದಂತೆ ನೀಗಿ ನಿಗಿಸುತ್ತಿದ್ದು ಎಲ್ಲಾ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೌಮ್ಯ ರೆಡ್ಡಿ ಅವರು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನ ಪಂತರ ಪಾಳ್ಯ ದಿಂದ ರಾಜಾಜಿನಗರ 6ನೇ ಬ್ಲಾಕ್ ವರೆಗೂ ರ್ಯಾಲಿ  ಮುಖಾಂತರ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಪರವಾಗಿ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ ಶ್ರೀ ಪ್ರಿಯಕೃಷ್ಣ ರವರು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಭಾಗಿಯಾಗಿ ಸೌಮ್ಯ ರೆಡ್ಡಿ ಅವರ ಮತಯಾಚನೆ ಯಶಸ್ವಿಗೊಳಿಸಿದರು.

 

 

Related