ಕೆ.ಆರ್.ಪುರ : ಎ.ಟಿ.ಎಂ ದರೋಡೆ

ಕೆ.ಆರ್.ಪುರ :  ಎ.ಟಿ.ಎಂ ದರೋಡೆ

ಕೆ.ಆರ್. ಪುರ : ದುಷ್ರ‍್ಮಿಗಳು ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರ ವನ್ನು ಕತ್ತರಿಸಿ ಸುಮಾರು 11 ಲಕ್ಷ ರೂಪಾಯಿ ಕದ್ದು ಪರಾರಿಯಾಗಿರುವ ಘಟನೆ ಕೆ.ಆರ್.ಪುರ ಯಲ್ಲಿ ನಡೆದಿದೆ.

ಬಟ್ಟರಹಳ್ಳಿಯ ಬಸವನಪುರ ಮುಖ್ಯರಸ್ತೆಯಲ್ಲಿ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕವಿದೆ, ಗುರುವಾರ ತಡರಾತ್ರಿ ಸುಮಾರು 2.30 ಸಮಯದಲ್ಲಿ ಸೆಕ್ಯುರಿಟಿ ಗಾಡ್೯ ಇಲ್ಲದ ಎಟಿಎಂ ಘಟಕಕ್ಕೆ ನುಗ್ಗಿ ಸಿಸಿಟಿವಿ ಕ್ಯಾಮರಾಗೆ ಬಣ್ಣ ಬಳೆದು ನಂತರ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿ ಎಟಿಎಂ ಯಂತ್ರದಲ್ಲಿದ ಲಕ್ಷಾಂತರ ರೂಪಾಯಿ ಎಗರಸಿ ಪರಾರಿಯಾಗಿದ್ದಾರೆ.

ಶುಕ್ರವಾರ ಮುಂಜಾನೆ 6:30 ವೇಳೆ ಸಾರ್ವಜನಿಕರು ಎಟಿಎಂ ಘಟಕದಲ್ಲಿ ಹಣ ಪಡೆಯಲು ಹೋದಾಗ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅಗಮಿಸಿದ ಎಸಿಪಿ ಮನೋಜ್ ಕುಮಾರ್, ಇನ್ಸ್ ಪೆಕ್ಟರ್ ಅಂಬರೀಶ್ ಬೆರಳಚ್ಚು ತಜ್ಞರು ರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಎಟಿಎಂ ಘಟಕ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಬ್ಯಾಂಕ್‌ ಅಧಿಕಾರಿಗಳು ಹಾಗೂ ಘಟಕದ ಭದ್ರತಾ ಉಸ್ತುವಾರಿ ಹೇಳಿಕೆ ಪಡೆದು ಪ್ರಕರಣ ಸಂಭಂಧ ಕೆಅರ್ ಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related