ಜೆಡಿಎಸ್ ಕಛೇರಿ ಉದ್ಘಾಟನೆ

ಜೆಡಿಎಸ್ ಕಛೇರಿ ಉದ್ಘಾಟನೆ

ದಾಸರಹಳ್ಳಿ : ಕ್ಷೇತ್ರದ ಪ್ರತಿಮನೆಗೂ ಸೌಲಭ್ಯ ದೊರೆಯಬೇಕೆಂದರೆ ಮುಂದೆ ಬರುವ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಹೇಳಿದರು. ಬುಧವಾರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್ ಜೆಡಿಎಸ್ ಕಚೇರಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಆರ್ ಮಂಜುನಾಥ್ ನಮ್ಮ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿಯೂ ಪಕ್ಷದ ಕಚೇರಿ ಇದ್ದು, ದಾಸರಹಳ್ಳಿ ವಾರ್ಡ್ ನಲ್ಲಿ ಜೆಡಿಎಸ್ ಹಿರಿಯ ಮುಖಂಡ ತಮ್ಮಣ್ಣನವರ ನೇತೃತ್ವದಲ್ಲಿ ಕಛೇರಿಯನ್ನು ತೆರೆಯಲಾಗಿದೆ. ಕಚೇರಿಯಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಚುನಾವಣಾ ಗುರುತಿನ ಚೀಟಿ ವಿಧವಾ ವೇತನ ಸಂಧ್ಯಾ ಸುರಕ್ಷಾ ಯೋಜನೆ ಅಂಗವಿಕಲರ ವೇತನ ಇನ್ನು ಮುಂತಾದ ಸರಕಾರಿ ಸೌಲಭ್ಯ ದೊರೆಯುವ ಗುರುತಿನ ಚೀಟಿಗಳನ್ನು ಮಾಡಿಕೊಡಲಾಗುತ್ತದೆ. ಇದರ ಜೊತೆಗೆ ವಾರ್ಡಿನಲ್ಲಿ ಇರುವ ಮೂಲಭೂತ ಸಮಸ್ಯೆಗಳನ್ನು ಕಚೇರಿಯಲ್ಲಿ ಬಂದು ತಿಳಿಸಿದರೆ ತಕ್ಷಣವೇ ಕ್ರಮ ಕೈಗೊಂಡು ಪರಿಹರಿಸುವಂತ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಅಂದನಪ್ಪ ದಾಸರಹಳ್ಳಿ ವಾರ್ಡ್ ಜೆಡಿಎಸ್ ಅಧ್ಯಕ್ಷರಾದ ತಮ್ಮಣ್ಣ, ಮಾಜಿ ಪಾಲಿಕೆ ಸದಸ್ಯರಾದ ಪುಟ್ಟಮ್ಮ,  ಜೆಡಿಎಸ್ ಮುಖಂಡರಾದ ಜಗದೀಶ್, ಚರಣ್ ಗೌಡ್ರು, ಜಯಣ್ಣ, ಪಾಪಣ್ಣ, ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.

Related