ರಸ್ತೆ ಸರಿ ಪಡಿಸಿದ ಜೆಡಿಎಸ್ ನಾಯಕಿ

ರಸ್ತೆ ಸರಿ ಪಡಿಸಿದ ಜೆಡಿಎಸ್ ನಾಯಕಿ

ದೇವದುರ್ಗ : ತಾಲೂಕಿನ ಗಣಜಿಲಿ ಹಾಗೂ ಪಂದ್ಯಾನ ಮುಖ್ಯರಸ್ತೆಯನ್ನು ಸರಿಪಡಿಸಲು ಶಾಸಕರನ್ನು ಮತ್ತು ಅಧಿಕಾರಿಗಳನ್ನು ಕೇಳಿದರು, ಜನರ ಸಮಸ್ಯೆಯ ಪರಿಹಾರಕ್ಕೆ ಸ್ಪಂದನೆ ಮಾಡದ ಕೆಲಸವನ್ನು ಜೆಡಿಎಸ್ ಪಕ್ಷದ ಅಧಿನಾಯಕಿ ಶ್ರೀಮತಿ ಕರೆಮ್ಮ ಜಿ ನಾಯಕರವರು ರಸ್ತೆಗೆ ಅನುಕೂಲ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಗಣಜಿಲಿ ಹನುಮಂತ್ರಾಯ ಹರ್ಷ ವ್ಯಕ್ತಪಡಿಸಿದರು
ರೈತರ ಜಮೀನುಗಳಿಗೆ ಹೋಗಲು ರಸ್ತೆಯ ಸಮಸ್ಯೆಗೆ ಅಧಿಕಾರಿಗಳ ಬೇಜವಾಬ್ದಾರಿತನದ ನಡೆಗೆ ಬೇಸತ್ತು, ಶ್ರೀಮತಿ ಕರೆಮ್ಮ ಜಿ ನಾಯಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ತಕ್ಷಣವೇ ಸಂಜೆಯ ಹೊತ್ತಿಗೆ ಗ್ರಾಮಕ್ಕೆ ಆಗಮಿಸಿ ಸಮಸ್ಯೆಯನ್ನು ಆಲಿಸಿದರು. ಬುಧವಾರ ನಾಲ್ಕು ಪೈಪ್‍ಗಳನ್ನು ಮರಾಮು ಹಾಕಿಸುವ ಮೂಲಕ ಎರಡು ಹಳ್ಳಿಗಳ ಜನರಿಗೆ ಅನುಕೂಲ ಮಾಡಿಕೊಟ್ಟರು.

Related