ಗೊವುಗಳ ರಕ್ಷಣೆ ನಮ್ಮೇಲ್ಲರ ಕರ್ತವ್ಯ

ಗೊವುಗಳ ರಕ್ಷಣೆ ನಮ್ಮೇಲ್ಲರ ಕರ್ತವ್ಯ

ಕೊಟ್ಟೂರು : ಗೋವುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅವುಗಳ ಆರೈಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಉಜ್ಜಯಿನಿ ಜಗದ್ಗುರು ಶಿವಚಾರ್ಯ ಶ್ರೀ ಗಳು ಶುಕ್ರವಾರ ಹೇಳಿದರು. ರಾಷ್ಟ್ರೀಯ ಜಾನುವಾರ ರೋಗ ನಿಯಂತ್ರಣ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಜಯನಗರ ಜಿಲ್ಲೆ ಪಶು ಚಿಕಿತ್ಸಾಲಯ ಸಹಯೋಗದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಅಯೋಜಿ ಸಲಾಗಿದ್ದು. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡಿಯಲಿ ಎಂದು ಶ್ರೀ ಗಳು ನುಡಿದರು. ಜನುವಾರುಗಳಿಗೆ ಔಷಧಿಯನ್ನು ಜಗದ್ಗುರು ಶ್ರೀ ಗಳು ಹಾಗೂ ಪ್ರಭಾರಿ ಸಹಾಯಕ ನಿರ್ದೇಶಕರು ಡಾಕ್ಟರ್ ಕೊಟ್ರೇಶಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪರಿಕ್ಷಕ ಮಲ್ಲಿಕಾರ್ಜುನ ,ವಾಗೀಶ್ ,ಶಿವಮೂರ್ತಿ, ಬಸಯ್ಯ ,ಪೀಠದ ವಿರೇಶ ,ಇತರರು ಸಿಬ್ಬಂದಿ ವರ್ಗದವರು ಇದ್ದರು.

Related