“ಜನ ಕಲ್ಯಾಣಕ್ಕಾಗಿ ಅನುಷ್ಠಾನ ಪರಶುರಾಮ ಮಹಾರಾಜರು “

“ಜನ ಕಲ್ಯಾಣಕ್ಕಾಗಿ ಅನುಷ್ಠಾನ ಪರಶುರಾಮ ಮಹಾರಾಜರು “

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ್ ರಸ್ತೆಯ ಪಕ್ಕದಲ್ಲಿರುವ ಮೈಸಮ್ಮ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸದ ಪ್ರಯುಕ್ತ ಪರಶುರಾಮ ಮಹಾರಾಜರು 21 ದಿವಸಗಳ ಅನುಷ್ಠಾನ ಕೈಗೊಂಡಿದ್ದರು.ಇವತ್ತು

ಕೊನೆಯ ದಿವಸವಾಗಿದ್ದರಿಂದ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದ ಪರಶುರಾಮ ಮಹಾರಾಜರು ಈ ಅನುಷ್ಠಾನ ಕುಳಿತಿದ್ದು ಜನರಕಲ್ಯಾಣಕ್ಕಾಗಿ ಈಗ ಕೆಟ್ಟ ದಿನಗಳು ಮುಗಿದಿದ್ದು, ಮುಂದಿನ ದಿನಗಳು ಒಳ್ಳೆಯ ದಿನಗಳಾಗಿವೆ. ವಿವಿಧ ರೀತಿಯ ರೋಗಗಳಿಂದ ನರಳುತ್ತಿರುವ ಜನರಿಗೆ ಗುಣಮುಖರಾಗಿ ಮಾಡುತ್ತಿದ್ದೇನೆ. ನಾನು ಆರಾಧಿಸುವ ದೇವತೆ ನಮ್ಮ ಜತೆಯಲ್ಲಿದ್ದಾರೆ. ನನ್ನಿಂದ ಭಕ್ತಾಧಿಗಳಿಗೆ ಒಳ್ಳೆಯದಾದರೆ ಸಾಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಮ್ಮ ಪೂಜಾರಿ ದೇವಸ್ಥಾನದ ಅರ್ಚಕರು ,ಗೌತಮ್ ಎಂ ಸಾಮಾಜಿಕ ಕಾರ್ಯಕರ್ತ, ಶಿವರಾಂ ಪೂಜಾರಿ, ಆಕಾಶ್, ಗೋಪಾಲ್’ ಇದ್ದರು.

Related