ಜನಪ್ರತಿನಿಧಿಗಳ ಬಲೆಗೆ ಕಾದಿದೆ ದೊಡ್ಡ ಜಾಲ!

ಜನಪ್ರತಿನಿಧಿಗಳ ಬಲೆಗೆ ಕಾದಿದೆ ದೊಡ್ಡ ಜಾಲ!

ಯಾದಗಿರಿ : ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಶಾಸಕರನ್ನು ಸಿಲುಕಿಸುವ ದೊಡ್ಡ ಜಾಲವೇ ಬೆಂಗಳೂರಲ್ಲಿ ಇದೆ. ಅವರೆಲ್ಲರ ಪ್ರವೃತ್ತಿಯಿಂದಲೇ ಇಂಥ ಕೆಲಸ ಮಾಡುತ್ತಾರೆ. ಅವರಿಗೆ ಧೂಮಪಾನ, ಮದ್ಯಪಾನ ಹೇಗೆಯೋ ಇದು ಹಾಗೆಯೇ. ಇಂಥವರನ್ನು ಟಾರ್ಗೆಟ್ ಮಾಡುವ ಜಾಲ ಬೆಂಗಳೂರಿನಲ್ಲಿದೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮೌಲಾಲಿ ಹೇಳಿಕೆ ನೀಡಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕಾರಣಿಗಳ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 224 ಶಾಸಕರ ಪೈಕಿ 60 ಪ್ರತಿಶತ ಶಾಸಕರು ಇಂಥ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ. ಧೂಮಪಾನ ಮದ್ಯಪಾನದಂತೆಯೆ ಇದು ಕೂಡಾ ಆಗಿದೆ. ಇಂಥವರನ್ನ ಟಾರ್ಗೆಟ್ ಮಾಡುತ್ತಾರೆ.

ಈ ಜಾಲಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಶಾಸಕರೇ ಟಾರ್ಗೆಟ್. ಹನಿ ಟ್ರಾಪ್‌ನಲ್ಲಿ ರಾಜಕೀಯ ನಾಯಕರು ಸಿಲುಕುವುದು ಹೊಸದೇನು ಅಲ್ಲಾ. ಇನ್ನೂ ವಿಡಿಯೊ ಕೂಡ ನಡೆಯುತ್ತದೆ ನಮ್ಮ ಭಾಗದ ಶಾಸಕರು ಮೈ ಮರೆಯದೆ ಎಚ್ಚರಿಕೆಯಿಂದ ಇರಬೇಕು. ಇಂಥ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮುನ್ನ ಹೆಂಡತಿ ಮಕ್ಕಳನ್ನ ನೆನೆಸಿಕೊಳ್ಳಿ. ಶಾಸಕರಾದವರಿಗೆ ಸಂಸ್ಕೃತಿ ಸಂಸ್ಕಾರ ಬುದ್ಧಿ ಇರಬೇಕು. ಅಂತ ಹೇಳಿಕೆ ನೀಡಿದ್ದಾರೆ.

ಸಂತ್ರಸ್ತರಿಗೆ ಜೀವ ಭಯ ಇದ್ದರೆ ನನ್ನ ಹತ್ತಿರ ಬಂದರೆ ನ್ಯಾಯ ಒದಗಿಸುತ್ತೇನೆ. ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಪಾಪದವರು, ಬೆಂಗಳೂರಿನವರAತೆ ಸ್ಮಾರ್ಟ್ ಅಲ್ಲ. ಹೀಗಾಗಿ ಅಂತಹ ಜಾಲಕ್ಕೆ ಬಲಿಯಾಗ್ತಾರೆ ಎಂದು ಹೇಳಿದ್ದಾರೆ.

Related