ಕಾಂಗ್ರೆಸ್ ನಾಯಕರಿಗೆ ಖಡಕ್ ಉತ್ತರ ನೀಡಿದ ಎಚ್ ಡಿ ಕೆ

ಕಾಂಗ್ರೆಸ್ ನಾಯಕರಿಗೆ ಖಡಕ್ ಉತ್ತರ ನೀಡಿದ ಎಚ್ ಡಿ ಕೆ

ಮಂಡ್ಯ: ನಾನು ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿರುವ ರೈತರ ಸಾಲ ಮನ್ನಾ ಮಾಡಿದ್ದೇನೆ ಮತ್ತು ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಹೋರಾಟ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವಂತಹ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಿನ್ನೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪರವಾಗಿ ಮತ ಪ್ರಚಾರದಲ್ಲಿ ತೊಡಗಿ ಮಾತನಾಡಿದ ಅವರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅವರ ಕೊಡುಗೆ ಏನು ಅಂತ ಕೇಳಿರುವ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡಿದರು. 2016-17 ರ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡ್ಯದಲ್ಲಿ ರೈತರ ಸಾಲುಸಾಲು ಅತ್ಮಹತ್ಯೆ ಪ್ರಕರಣಗಳು ನಡೆದವು. ಮೃತ ರೈತರ ಕುಟುಂಬಗಳಿಗೆ ಯಾವೊಬ್ಬ ಕಾಂಗ್ರೆಸ್ ನಾಯಕನೂ ಸಾಂತ್ವನ ಹೇಳಲಿಲ್ಲ.

ತಾನು ಆಧಿಕಾರದಲ್ಲಿರದಿದ್ದರೂ ರೈತರ ಮನೆಗಳಿಗೆ ಹೋಗಿ ಕೈಲಾದಷ್ಟು ಧನ ಸಹಾಯ ಮಾಡಿದ್ದೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂಥ ಹತಾಷೆಯನ್ನು ಮನಸಲ್ಲಿ ತಂದುಕೊಳ್ಳಬೇಡಿ, ನಿಮ್ಮ ಕಷ್ಟಗಳಿಗೆ ನಾವಿದ್ದೇವೆ ಅಂತ ಮನವಿ ರೈತರಿಗೆ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

 

Related