ದಾಸರಹಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸುವ ನಿಟ್ಟಿನಲ್ಲಿ ಶುಕ್ರವಾರ ಬಾಗಲಗುಂಟೆ ವಾರ್ಡ್ನ ದೇವಸ್ಥಾನಗಳಿಗೆ ಕಸದ ಬುಟ್ಟಿಗಳನ್ನು ನೀಡಿ, ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಮಾಜಿ ಶಾಸಕ ಎಸ್. ಮುನಿರಾಜು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇವಸ್ಥಾನಗಳ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಿ ಎಂದು ಕಸದ ಬುಟ್ಟಿಗಳನ್ನು ನೀಡಲಾಗಿದೆ. ದೇಶದ 135 ಕೋಟಿ ಜನರು ಕೈ ಜೋಡಿಸಿದರೆ ಸ್ವಚ್ಛತೆಯನ್ನು ಕಾಣಬಹುದು. ಇದರಿಂದ ಪರಿಸರದ ವಾತಾವರಣ ಕೂಡ ಚನ್ನಾಗಿ ಇರುತ್ತದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಜಿ. ಗುರುಪ್ರಸಾದ್, ನಟರಾಜು , ನಾರಾಯಣ್ , ಸೌಂದರ್ಯ ಭರತ್ , ಬಿ.ಎಂ.ನಾರಾಯಣ್ , ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಮಧು ಸೂಧನ್ , ಯುವ ಮೋರ್ಚಾ ಅಧ್ಯಕ್ಷ ಮಧು ಇನ್ನಿತರರಿದ್ದರು.