ಹಣದ ವ್ಯವಹಾರಕ್ಕಾಗಿ : ಯುವಕನ ಹತ್ಯೆ

ಹಣದ ವ್ಯವಹಾರಕ್ಕಾಗಿ : ಯುವಕನ ಹತ್ಯೆ

ಸಿಂದಗಿ : ತಾಲೂಕಿನ ಬೂದಿಹಾಳ ಪಿ. ಎಚ್. ಗ್ರಾಮದಲ್ಲಿ ಹಣದ ವ್ಯವಹಾರ ಹಿನ್ನೆಲೆ ವೈಷಮ್ಯಕ್ಕೆ ಬಿಜೆಪಿ ಯುವ ಮುಖಂಡನನ್ನು ಭೀಕರವಾಗಿ ಇರಿದು ಕೊಲೆ ಮಾಡಿದ ಘಟನೆ ಬುಧವಾರ  ನಡೆದಿದೆ.

ಗ್ರಾಮದ ಅನೀಲ ಶರಣಪ್ಪ ಇಂಗಳಗಿ(30) ಎಂಬಾತನನ್ನು ಮನಬಂದAತೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಹಣದ ವಿಷಯವಾಗಿ ಗ್ರಾಮದ ಯುವಕರೊಂದಿಗೆ ಮಾತಿನ ಚಕಮಕಿ ನಡೆದಿದ್ದು ಈ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಸಂಶಯಿಸಿದ್ದಾರೆ.

ಬೆಳಿಗ್ಗೆ ಮನೆಯಿಂದ ಬಂದ ಅನೀಲ ಗ್ರಾಮದ ಕುಂಬಾರ ಹೊಟೇಲಿನಲ್ಲಿ ಉಪಹಾರ ಸೇವಿಸುತ್ತಿದ್ದ. ಏಕಾಏಕಿ ಒಳಬಂದ ಮೂವರು ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಕುತ್ತಿಗೆ, ಹೊಟ್ಟೆ, ಕೈ ಮೇಲೆ ದಾಳಿ ನಡೆಸಿದ್ದಾರೆ.

ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಶವ ಪರಿಶೀಲನೆ ನಡೆಸಿದಾಗ, ಅಲ್ಲದೇ ಹೊಟ್ಟೆಗೆ ಇರಿದ ಚಾಕು ಹೊಟ್ಟೆಯಲ್ಲೇ ಉಳಿದಿತ್ತು. ಇಂತಹ ಭೀಕರ ಸ್ಥಿತಿಯಲ್ಲಿದ್ದ ಮಗನ ಶವ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತನ ತಂದೆ ಶರಣಪ್ಪ ಇಂಗಳಗಿ ನೀಡಿದ ದೂರಿನನ್ವಯ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related