ಕಾರ್ ಶೋನಲ್ಲಿ ಅಗ್ನಿ ದುರಂತ

ಕಾರ್ ಶೋನಲ್ಲಿ ಅಗ್ನಿ ದುರಂತ

ಧಾರವಾಡ, ಫೆ. 22 : ಟೊಯೋಟಾ ಕಾರ್ ಶೋರೂಂವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 10ಕ್ಕೂ ಹೆಚ್ಚು ಕಾರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ರಾಯಾಪೂರದಲ್ಲಿ ನಡೆದಿದೆ.
ನಗರದ ರಾಯಪುರ ಬಳಿಯಿರುವ ಶೋಧಾ ಟೊಯೋಟಾ ಕಾರ್ ಸ್ಕ್ರ್ಯಾಪ್ ಶೋರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ಕಾರುಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ದಳ ನಂದಿಸುವಲ್ಲಿ ಯಶಸ್ವಿಯಾಗಿದೆ. ಹುಬ್ಬಳ್ಳಿಯ ಎಪಿಎಂಸಿ- ನವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related