ಬೆಂಗಳೂರು: ಫೆಬ್ರವರಿ 1, 2024 ರಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರ 57 ನೇ ಹುಟ್ಟುಹಬ್ಬದ ಪ್ರಯುಕ್ತಆಯೋಜಿಸಿದ್ದ ದಕ್ಷಿಣ ವಲಯ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾಟದ ಫೆೈನಲ್ ಪಂದ್ಯಾವಳಿಯನ್ನು ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ವೀಕ್ಷಿಸಲಾಯಿತು.
ಫೈನಲ್ಸ್ ಪಂದ್ಯಾವಳಿಯ ಫಲಿತಾಂಶ
ಪುರುಷರ ವಿಭಾಗದಲ್ಲಿ
ಪ್ರಥಮ : ನೈರುತ್ಯ ರೈಲ್ವೇಸ್, ಹುಬ್ಬಳ್ಳಿ
ದ್ವಿತೀಯ : ಕರ್ನಾಟಕ ತಂಡ
ತೃತೀಯ : ಆಂಧ್ರಪ್ರದೇಶ ತಂಡ
ಚತುರ್ಥ : ಪಾಂಡಿಚೇರಿ ತಂಡ
ಮಹಿಳಾ ವಿಭಾಗದಲ್ಲಿ
ಪ್ರಥಮ : ಕೇರಳ ರಾಜ್ಯ ಪೊಲೀಸ್ ತಂಡ
ದ್ವಿತೀಯ : ದಕ್ಷಿಣ-ಮಧ್ಯ ರೈಲ್ವೇಸ್, ಸಿಕಂದರಾಬಾದ್
ತೃತೀಯ : ಜೆಪಿಆರ್ ತಮಿಳುನಾಡು ತಂಡ
ಚತುರ್ಥ : ಕರ್ನಾಟಕ ತಂಡ
ಈ ವೇಳೆ ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಿಸಿ, ಎಲ್ಲಾ ಕ್ರೀಡಾಳುಗಳಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಶ್ರೀ ಮನೋಹರ ರೆಡ್ಡಿ, ಪಂದ್ಯಾವಳಿಗಳ ಆಯೋಜಕರು ಹಾಗೂ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಬ್ಬಡ್ಡಿ ಪಿಳ್ಳಪ್ಪ ಸೇರಿದಂತೆ ಅಪಾರ ಕ್ರೀಡಾಭಿಮಾನಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.