ಧಾರವಾಡ : ಜಿಲ್ಲಾಡಳಿತ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ ಸ್ವಾತಂತ್ರ್ಯ ಹೋರಾಟಗಾರರಾದ ಕೆಲಗೇರಿ ನಿವಾಸಿ ನಿಂಗಯ್ಯ, ದಾನಯ್ಯ, ಶಿಸಂಬ್ರೀಮಠರನ್ನು ಸೋಮವಾರದಂದು ರಾಜ್ಯ ಸರ್ಕಾರ ಗೌರವಿಸಿ ಸನ್ಮಾನಿಸಿದೆ.
ಶಿಸಂಬ್ರಿ 93ರ ಇಳಿ ವಯಸ್ಸಿನಲ್ಲೂ ಯುವಕರಂತೆ ಗದ್ದೆಯಲ್ಲಿ ಕೆಲಸಮಾಡಿ ಕಾಯಕ ಯೋಗಿಯಾಗಿದ್ದು, ಜಿಲ್ಲಾಡಳಿತ ಅವರ ಮನೆಗೆ ತೆರಳಿ ಸನ್ಮಾನಿಸಿದರು. ತಹಶೀಲ್ದಾರ್ ಸಂತೋಷ ಬಿರಾದರ್, ಸಿಬ್ಬಂದಿ, ಊರಿನ ಮುಖಂಡರು ಇನ್ನಿತರರಿದ್ದರು.