ಉದ್ಯಮದಲ್ಲಿ ಮಹಿಳೆಯರಿಗೆ ಉತ್ಸಾಹ-ಕಿಚ್ಚು ಅತ್ಯವಶ್ಯಕ: ಕೆ ರತ್ನಪ್ರಭಾ

ಉದ್ಯಮದಲ್ಲಿ ಮಹಿಳೆಯರಿಗೆ ಉತ್ಸಾಹ-ಕಿಚ್ಚು ಅತ್ಯವಶ್ಯಕ: ಕೆ ರತ್ನಪ್ರಭಾ

ಬೆಂಗಳೂರು: ಹೀರೋಯಿನ್ ಕಾಂಕ್ಲೇವ್ (ನಾಯಕಿಯರ ಶೃಂಗಸಭೆ) ಅನ್ನು ಹರ್ ಮನಿ ತಾಕ್ಸ್ ಮತ್ತು ಉಬುಂಟು ಸಹಯೋಗದೊಂದಿಗೆ ಹಣ ಸಹಾಯಕ್ಕೆ ಹುಡುಕಾಟ ಮತ್ತು ಉದ್ಯಮ ಬೆಳವಣಿಗೆ ಕುರಿತು ಕಾರ್ಯಕ್ರಮವನ್ನು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ (ಶುಕ್ರವಾರ ಮಾ.22) ಆಯೋಜಿಸಲಾಗಿತ್ತು.

ಇದು ಮಹಿಳಾ ಉದ್ಯಮಿಗಳ ಬೆಳವಣಿಗೆಗೆ ಸಹಕಾರಿಯಾಗುವಂತಹ ಕಾರ್ಯಕ್ರಮವಾಗಿದ್ದು ಬ್ಯಾಂಕ್ ಸಹಯೋಗದೊಂದಿಗೆ ಹಣ ಹೊಂದಾಣಿಕೆ ಮಾಡುವ ಪ್ರಯತ್ನವಾಗಿತ್ತು.

ಉಬುಂಟು ಸಂಸ್ಥಾಪಕಿ ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಮಾತನಾಡಿ, ಬಂಡವಾಳ ಹೂಡಿಕೆ ಮತ್ತು ಉದ್ಯಮ ಬೆಳವಣಿಗೆ ಎನ್ನುವುದು ಎರಡು ಪ್ರಮುಖ ಅಂಶಗಳು. ಮಹಿಳೆಯರು ನಮ್ಮ ಬೆಳವಣಿಗೆಗೆ ಯಾರಾದರೂ ದಾರಿ ತೋರಿಸಲಿ ಎಂದು ಕಾಯುವ ಬದಲು ನಮ್ಮತನವನ್ನು ನಾವು ಸಾಬೀತುಪಡಿಸಿಕೊಳ್ಳಬೇಕು.

ಉದ್ಯಮದ ಕ್ಷೇತ್ರ ಬಂದಾಗ ಮಹಿಳೆಯರಿಗೆ ಒಂದು ರೀತಿಯ ಉತ್ಸಾಹ ಕಿಚ್ಚು ಇರುತ್ತದೆ. ಆ ಕಿಚ್ಚು ಮತ್ತು ಉತ್ಸಾಹವನ್ನು ಉತ್ತುಂಗಕ್ಕೆ ತಲುಪುವಂತೆ ಮಾಡಬೇಕು ಅದೇ ನಮ್ಮ ಸಾಮರ್ಥ್ಯ ಎಂದರು ರತ್ನಪ್ರಭಾ ಅವರು.

ಏನಾದರೂ ಸಬೂಬು ಹುಡುಕುವ ಬದಲಿಗೆ ಮಹಿಳೆಯರು ತಿಟ್ಟ ಹೆಜ್ಜೆಯನ್ನು ಇಟ್ಟು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಾಲಿನಿ ರಜನೀಶ್, ಕರ್ನಾಟಕ ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು, ಐಶ್ವರ್ಯ ಡಿಕೆ ಹೆಗ್ಡೆ, ಉಬುಂಟು ಸಂಸ್ಥೆಯ ಜ್ಯೋತಿ ಬಾಲಕೃಷ್ಣ ಸೇರಿದಂತೆ ಇತರೆ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.

Related