ಮಹಿಳೆಯರು, ಮಕ್ಕಳಿಗೆ ಮೊಟ್ಟೆ ವಿತರಣೆ

ಮಹಿಳೆಯರು, ಮಕ್ಕಳಿಗೆ ಮೊಟ್ಟೆ ವಿತರಣೆ

ದೇವದುರ್ಗ: ತಾಲೂಕಿನ ಅರಕೇರ ವ್ಯಾಪ್ತಿಯ ಮುಷ್ಠೂರು ಗ್ರಾಮ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಇಲಾಖೆ ದೇವದುರ್ಗ ಇವರ ಸಹಯೋಗದಲ್ಲಿ ಬುಧವಾರ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆಗಳನ್ನು ವಿತರಣೆ ಮಾಡಲಾಯಿತು. ಗ್ರಾ.ಪಂ ಅಧ್ಯಕ್ಷೆ ರೇಣುಕಾ ಮಾತನಾಡಿ ಮಹಾಮಾರಿ ಕೊರೊನಾದಿಂದ ಶಾಲೆಗಳು, ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗಿದ್ದು, ಸರ್ಕಾರದಿಂದ ನೀಡುವ ಮೊಟ್ಟೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಲಕ್ಷ್ಮಿ ಜಿ ನಾಯಕ, ಶಿಕ್ಷಣ ಪ್ರೇಮಿ ಹಂಪಣ್ಣ ಹಡಪದಿ, ಶೃತಿ ಸಂಸ್ಕೃತಿ ತಾಲೂಕು ಸಂಯೋಜಕ ರಾಮಣ್ಣ ಎನ್ ಗಣೇಕಲ್, ಅಂಗನವಾಡಿ ಕಾರ್ಯಕರ್ತೆಯರಾದ ಚನ್ನಬಸಮ್ಮ ನಾಯಕ, ಚನ್ನಬಸಮ್ಮ ಪಾಟೀಲ್, ಕೆ ರೇಣುಕಾ, ಪಾರ್ವತಮ್ಮ ಇನ್ನಿತರರಿದ್ದರು.

Related