ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕ

ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕ

ಪಾವಗಡ : ಭದ್ರಾ ಕುಡಿಯುವ ನೀರಿನ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಮಾರ್ಗದಿಂದ ಕುಮುಟ ಕೊಡಮಡಗು ವರೆಗೂ ಸಾಗುತ್ತಿರುವ ಕುಡಿಯುವ ನೀರಿನ ಕಾಮಗಾರಿಯ ಸರ್ಕಾರದ ನಿಯಮಾವಳಿಗಳನ್ನು ಮೀರಿ ಸಾಗುತ್ತಿದೆ ಹಾಲಿ ಶಾಸಕರು ಮತ್ತು ಸ್ಥಳೀಯ ಅಧಿಕಾರಿಗಳು ಆಮಿಷಗಳಿಗೆ ಒಳಗಾಗಿ ಯೋಜನೆಯ ಹಾದಿಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿಕೆಯು ರಸ್ತೆಯ ಅಂಚಿನಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಹಲವು ಅಭಿವೃದ್ಧಿಗಳಿಗೆ ತೊಂದರೆ ಮಾಡಿಕೊಡುತ್ತವೆ ಅಲ್ಲದೆ ಒಂದು ವೇಳೆ ಪೈಪು ಶಿಥಿಲಗೊಂಡಲ್ಲಿ ಅದನ್ನು ಸರಿಪಡಿಸಿ ಮತ್ತೆ ಕಾರ್ಯರೂಪಕ್ಕೆ ತರಲು ಭಾರಿ ಮೊತ್ತದ ನಷ್ಟ ಉಂಟಾಗುತ್ತದೆ.

ಈ ರೀತಿಯ ಹಲವು ತೊಂದರೆಗಳ ಗಮನಿಸದೆ ಕಾಮಗಾರಿಯು ನಡೆಯುತ್ತಿದ್ದು ಇದು ಸಾರ್ವಜನಿಕ ಅಭಿವೃದ್ಧಿಗೆ ಮುಂದೆಯ ಹಾನಿಯಾಗತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಮಾಜಿ ಶಾಸಕರು ಆಗ್ರಹಿದರು.

Related