ಸಮಂತಾಗೆ ನಾಗಚೈತನ್ಯನ ಕಂಡ್ರೆ ಆಗುವುದಿಲ್ಲ ಯಾಕೆಗೊತ್ತಾ ?

  • In Cinema
  • July 22, 2022
  • 246 Views
ಸಮಂತಾಗೆ ನಾಗಚೈತನ್ಯನ ಕಂಡ್ರೆ ಆಗುವುದಿಲ್ಲ ಯಾಕೆಗೊತ್ತಾ ?

ಸಮಂತಾ ಈ ರೀತಿ ಹೇಳಿಕೆ ಕೊಟ್ಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಗಚೈತನ್ಯ ಕಂಡರೆ ಸಮಂತಾಗೆ ಕೊಲ್ಲುವಷ್ಟು ಕೋಪ ಯಾಕೆ. ಅವರಿಬ್ಬರು ನಡುವೆ ಅಂಥದ್ದು ಏನಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.


ಸಮಂತಾ ಮತ್ತು ನಾಗ ಚೈತನ್ಯ ಟಾಲಿವುಡ್ನ ಹಾಟ್ ಟಾಪಿಕ್. ಇವರಿಬ್ಬರು ಪ್ರೀತಿಸಿ ಮದುವೆಯಾದಾಗಿನಿಂದ, ವಿಚ್ಛೇದನ ಪಡೆದ ನಂತರವೂ ಚರ್ಚೆಯ ವಿಷಯವಾಗಿದೆ. ವಿಚ್ಛೇದನದ ನಂತರವೂ ಈ ಜೋಡಿ ಏನೇ ಮಾಡಿದರೂ ಅದು ವೈರಲ್ ಆಗಿದೆ.


ನಾಗ ಚೈತನ್ಯ ಸಮಂತಾ ಪ್ರೀತಿಸಿ ಮದುವೆಯಾದವರು. ಕಳೆದ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಪಡೆದುಕೊಂಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ದಂಪತಿಗಳು ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು.


ಸಮಂತಾ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಶೋಗೆ ಹಾಜರಾಗಿದ್ದರು. ಈ ಶೋನಲ್ಲಿ ತಮ್ಮ ಮದುವೆ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಅವರು ತನ್ನ ಜೀವನವನ್ನು ತನ್ನ ಅಭಿಮಾನಿಗಳೊಂದಿಗೆ ಸ್ವಇಚ್ಛೆಯಿಂದ ಹಂಚಿಕೊಂಡಿದ್ದಾರೆ.

ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಟ್ರೋಲ್ ಮತ್ತು ಕಾಮೆಂಟ್ಗಳು ಬಂದಾಗ ನಾನು ನಿಜವಾಗಿಯೂ ದೂರು ನೀಡಲು ಸಾಧ್ಯವಿಲ್ಲ ಎಂದು ಸಮಂತಾ ಕರಣ್ಗೆ ಹೇಳಿದ್ದಾರೆ.

Related