ಬಂಧಿಸುವ ಬದಲು ಗಲ್ಲಿಗೇರಿಸಿ

ಬಂಧಿಸುವ ಬದಲು ಗಲ್ಲಿಗೇರಿಸಿ

ದಾವಣಗೆರೆ: ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಗೆ ಕಾರಣರಾದವರನ್ನು ಬಂಧಿಸುವ ಬದಲು ಗಲ್ಲಿಗೇರಿಸುವಂತೆ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

ದಲಿತ ಶಾಸಕರ ಮನೆಯ ಮೇಲೆ ದೇಶದ್ರೋಹಿಗಳು ವ್ಯವಸ್ಥಿತ ಪಿತೂರಿ ನಡೆಸಿ ಹಣ ಬಂಗಾರ ದೋಚಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇಂತಹವರನ್ನು ಜಮೀರ್ ಅಹಮ್ಮದ್ ಹಾಗೂ ಕಾಂಗ್ರೆಸ್‍ನ ಇತರ ನಾಯಕರು ಅಮಾಯಕರು ಎನ್ನುತ್ತಾರೆ. ಜಮೀರ್ ಅಹಮ್ಮದ್ ಹಾಗೂ ಮತ್ತಿತರ ದೇಶದ್ರೋಹಿಗಳ ಕುಮ್ಮಕ್ಕಿನಿಂದ ಈ ಗಲಭೆ ನಡೆದಿದೆ. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಎಸ್ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿದ್ದು ಅವನ್ನು ನಿಷೇಧ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ದೇಶದ್ರೋಹಕ್ಕೆ ಕುಮ್ಮಕ್ಕು ನೀಡುವವರು, ಪ್ರಚೋದನೆ ನೀಡುವವರನ್ನು ಈ ಹಿಂದೆ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದ್ದೆ. ಆದರೆ ಗುಂಡಿಕ್ಕಿ ಕೊಲ್ಲುವ ಬದಲು ಅವರನ್ನು ಗಲ್ಲಿಗೇರಿಸಬೇಕು. ಪೆÇಲೀಸರ ಆತ್ಮಸ್ಥೈರ್ಯ ಕುಂದಿಸುವ ಹೇಳಿಕೆಗಳನ್ನು ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹಮ್ಮದ್ ನೀಡುತ್ತಿದ್ದು, ಇದನ್ನು ಬಿಡಬೇಕು. ಈಗಾಗಲೇ ಆಸ್ತಿ ನಷ್ಟ ಮಾಡಿದವರ ಆಸ್ತಿ ಜಪ್ತಿ ಮಾಡಿ ಅವರಿಂದಲೇ ನಷ್ಟ ಭರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

Related