‘ಆಹಾರ ಕಿಟ್ ವಿತರಣೆ’

‘ಆಹಾರ  ಕಿಟ್ ವಿತರಣೆ’

ಶಹಾಪುರ :ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕೊರೋನಾ ಒಡೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ವಿರೋಧ ಪಕ್ಷದ ನಾಯಕ, ರಾಜ್ಯಸಭೆ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಯವರ ಅನುದಾನದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಚೆನ್ನಾರೆಡ್ಡಿಗೌಡ ಪಾಟೀಲ್ ಆಹಾರ ಕಿಟ್‌ಗಳನ್ನು ವಿತರಿಸಿದರು.
ನಂತರ ಮಾತಾನಾಡಿ ಕೊರೋನಾದಿಂದ ಜನರ ಬದುಕು ಸಂಕಷ್ಟಕ್ಕೇ ಸಿಲುಕಿಸಿದ್ದು ಎರಡು ವರ್ಷದಿಂದ ಬಡವರ ಬದುಕು ನೆಲಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಿ ಉಸಿರು ಕಲ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ ಭೀಮಣ್ಣ ಮೇಟಿ, ಡಾ ಕಾಮರೆಡ್ಡಿ, ತಮ್ಮಣ್ಣಗೌಡ ಜೋಳದ, ಮರೆಪ್ಪ ಬಿಳ್ಹಾರ, ನಿಜಗುಣ ದೋರನಹಳ್ಳಿ, ಮಾನಪ್ಪ ಹುಲಸೂರ, ರಾಜ ಮೈನುದ್ದೀನ್ ಜಮಾದಾರ ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡರು, ಗ್ರಾಮಸ್ಥರು ಇದ್ದರು.

Related