ಔರಾದ, ಕಮಲನಗರ ಸಂಪರ್ಕ ಕಡಿತ

ಔರಾದ, ಕಮಲನಗರ ಸಂಪರ್ಕ ಕಡಿತ

ಕಮಲನಗರ :ಧಾರಾಕಾರ ಮಳೆಯಿಂದ ತಾಲ್ಲೂಕಿನ ಬೆಳಕೋಣಿ ಹತ್ತಿರದ ಬಳತ, ತೋರಣಾವಾದಿ, ಹೋಳಸಮುದ್ರ ಮಧ್ಯೆಯಿರುವ ಸೇತುವೆಗಳ ಮೇಲೆ ನೀರು ಹಾದುಹೋಗುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಆ ಪ್ರದೇಶದ ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಕಟಾವಿಗೆ ಬಂದಿದ್ದ, ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ, ಸಂಪೂರ್ಣ ಹಾನಿಯಾಗಿದೆ ಎಂದು ಉಮೇಶ ಪಾಂಚಾವರೆ ರೈತ ಅಳಲನ್ನು ತೋಡಿಕೊಂಡರು.

ಅಧಿಕಾರಿಗಳು ಸರ್ವೆ ಮಾಡಿ, ಹಾನಿಯಾದ ಪ್ರದೇಶದ ರೈತರಿಗೆ ಪರಿಹಾರ ಒದಗಿಸಕೊಂಡಬೇಕೆಂದು ರೈತರ ಮುಖಂಡರು ಆಗ್ರಹಿಸಿದರು. ತಾಲ್ಲೂಕುಯಾದ್ಯಂತ ಜನ ಜೀವನ ಅಸ್ತವ್ಯಸ್ಥವಾಗಿದೆ. ಬೆಳಕೋಣಿ ಸೇತುವೆಯನ್ನು ದುರಸ್ತಿ ಮಾಡಬೇಕೆಂದು, ಗ್ರಾಮಸ್ಥರು ಪಿ ಡಬ್ಲ್ಯೂ ಡಿ ಅಧಿಕಾರಿಗಳಿಗೆ ಹೇಳಿದರು, ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ, ಅನಾಹುತಕ್ಕೆ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶಗೊಂಡರು.

Related