ಕೈ ಅಭ್ಯರ್ಥಿ ಪರ ದರ್ಶನ್ ಮತ ಬೇಟೆ

ಕೈ ಅಭ್ಯರ್ಥಿ ಪರ ದರ್ಶನ್ ಮತ ಬೇಟೆ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್ ಅವರ ಪರವಾಗಿ ದರ್ಶನ್ ಮತ್ತು ಇನ್ನಿತರ ಕನ್ನಡ ಚಿತ್ರರಂಗದ ಗಣ್ಯಾತಿ ಗಣ್ಯರು ಮತ ಪ್ರಚಾರ ಮಾಡಿದ್ದರು.

ಸುಮಲತಾ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನಿಗದಿದ್ದ ಕಾರಣ ಸುಮಲತಾ ಅಂಬರೀಶ್ ಅವರು ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇನ್ನು ನಟ ದರ್ಶನ್ ಮಂಡ್ಯ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರ ಅವರ ಪರವಾಗಿ ಇಂದಿನಿಂದ ಪ್ರಚಾರ ಅಖಾಡಕ್ಕಿಳಿದಿದ್ದು ಇದು ರಾಜ್ಯ ರಾಜಕೀಯದಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್, ಸುಮಲತಾ ಅವರ ಪರವಾಗಿ ಹಗಲಿರಳೆನ್ನದೆ ಪ್ರಚಾರ ಮಾಡಿದ್ದರು. ಈ ಸಲವೂ ಸುಮಲತಾ ಸ್ಪರ್ಧಿಸಿದರೆ ಅವರ ಪರ ಪ್ರಚಾರ ಮಾಡೋದಾಗಿ ದರ್ಶನ್ ಹೇಳಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ತನ್ನ ಸಹಯೋಗಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿತು.

ದರ್ಶನ್ ಅವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡರ (ಸ್ಟಾರ್ ಚಂದ್ರು) ಪರ ಪ್ರಚಾರ ಮಾಡಲು ಫೀಲ್ಡಿಗಿಳಿದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗೇರಿದೆ.

Related