ದರ್ಶನ್ ಅರೆಸ್ಟ್; ದರ್ಶನ್ ಮನೆ ಮುಂದೆ ಹೈ ಪೊಲೀಸ್ ವ್ಯವಸ್ಥೆ

ದರ್ಶನ್ ಅರೆಸ್ಟ್; ದರ್ಶನ್ ಮನೆ ಮುಂದೆ ಹೈ ಪೊಲೀಸ್ ವ್ಯವಸ್ಥೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ ಅವರು ಈ ಹಿಂದೆ ಹಲವಾರು ವಿಚಾರಗಳಿಗೆ ಸುದ್ದಿಯಾಗಿದ್ದರು. ಮತ್ತೆ ಇದೀಗ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಸುದ್ದಿಯಾಗಿದ್ದಾರೆ.

ಹೌದು, ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ನಟ ದರ್ಶನ್ ಅವರು ಮತ್ತು ಅವರ (ಗುಂಪು  ಸುಮಾರು 10 ಜನ) ಕೊಲೆ ಮಾಡಿರುವ ಪ್ರಕಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಇಂದು ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ನಟ ದರ್ಶನ್ ಅವರ ಮನೆ ಮುಂದೆ ಈಗಾಗಲೇ ಟೈಟ್ ಸೆಕ್ಯೂರಿಟಿಯನ್ನು ಒದಗಿಸಿದೆ. ಕಳೆದ ಬಾರಿ ದರ್ಶನವರ ಪತ್ನಿ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ ಅವರ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಬಂದು ಧರಣಿ, ಗಲಾಟೆ, ಇನ್ನಿತರ ಪ್ರಕರಣಗಳನ್ನು ಮಾಡಿದ್ದರು, ಆ ರೀತಿ ಯಾವುದೇ ಪ್ರಕರಣಗಳು ಆಗಬಾರದು ಎಂದು ನಟ ದರ್ಶನ್ ಅವರ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು ಮೃತ ರೇಣುಕಾ ಸ್ವಾಮಿಯವರ ಕುಟುಂಬದವರು ಬೆಂಗಳೂರಿನಲ್ಲಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಹತ್ರ ಬಂದು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅರೆಸ್ಟ್

ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಅಪೊಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ನಿನ್ನೆ ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು.

Related