ಡಿಕೆಶಿ ಪದ ಗ್ರಹಣ ನಿಮಿತ್ಯ ಪೂರ್ವಭಾವಿ ಸಭೆ

ಡಿಕೆಶಿ ಪದ ಗ್ರಹಣ ನಿಮಿತ್ಯ ಪೂರ್ವಭಾವಿ ಸಭೆ

ಹಗರಿಬೊಮ್ಮನಹಳ್ಳಿ : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ನಿಮಿತ್ಯ ಪಟ್ಟಣದ ಅಶೋಕ ಫಾರಂ ಹೌಸ್ ಆವರಣದಲ್ಲಿ ಪೂರ್ವಬಾವಿ ಸಭೆ ಕರೆಯಲಾಗಿತ್ತು.

ಈ ಸಭೆಯನ್ನು ಉದ್ದೇಶಿಸಿ ರಾಬಕೊ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಶಾಸಕ ಭೀಮನಾಯ್ಕ್ ಮಾತನಾಡಿ ಕಾಂಗ್ರೆಸ್ ಪಕ್ಷದ ರಾಜಕೀಯ ಚತುರ ಧೀಮಂತ ನಾಯಕ ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ನಿಮಿತ್ಯ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಒಟ್ಟಿಗೆ ಸೇರಿ ಪ್ರತಿಜ್ಞಾ ವಿಧಿಯನ್ನು ಯಶಸ್ವಿಗೊಳಿಸುವ ಮೂಲಕ ಮುಂಬಾರುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿಯಲು ಕರ್ನಾಟಕದಲ್ಲಿ ಕಾಗ್ರೇಸ್ ಪಕ್ಷವನ್ನು ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದರು.

Related